ಕೈಕಂಬ: ಬಂಟ್ವಾಳದ ಬಡಗಬೆಳ್ಳೂರು ಗ್ರಾಮದಲ್ಲಿ ಜೋರಾಗಿ ಬೀಸಿದ ಗಾಳಿಮಳೆಗೆ ಪರಿಮೊಗರು ಉಮೇಶ್ ಶೆಟ್ಟಿ ಎಂಬವರ ಅಡಕೆ ತೋಟ ಹಾಗೂ ಗದ್ದೆ ಪ್ರದೇಶದಲ್ಲಿ ಎರಡು ಮರಗಳು ಬುಡಸಮೇತ ಉರುಳಿದರೆ, ವಿದ್ಯುತ್ ಕಂಬ ಮುರಿದು ತಂತಿಗಳು ತುಂಡಾಗಿವೆ. ಇದರಿಂದ ತೋಟದ ಮಾಲೀಕರಿಗೆ ಅಪಾರ ನಷ್ಟ ಉಂಟಾಗಿದೆ. ಘಟನೆ ಬಳಿಕ ಸುತ್ತಲ ಪ್ರದೇಶದಲ್ಲಿ ಕೆಲವು ತಾಸು ವಿದ್ಯುತ್ ಕೈಕೊಟ್ಟಿತ್ತು.ಕೂಡಲೇ ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಧಾವಿಸಿದ್ದಾರೆ. 

