ಉಡುಪಿ : ಸಂಸ್ಕೃತ ಭಾರತೀ ಹಾಗೂ ತರುಣೋದಯ ಸಂಸ್ಕ್ರತ ಸೇವಾ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ 29 ನೇ ವರ್ಷದ “ಕರ್ನಾಟಕ ರಾಜ್ಯಸ್ತರೀಯ ಸಂಸ್ಕ್ರತ ಭಾಷಣ ಸ್ಪರ್ಧೆಯು, ಶಿವಮೊಗ್ಗದ ಸಂಸ್ಕ್ರತ ಭವನದಲ್ಲಿ ನಡೆಸಲ್ಪಟ್ಟಿತು.
“ನೂತನ ರಾಷ್ಟ್ರೀಯ ಶಿಕ್ಷಣ-ನೀತೌ ಸಂಸ್ಕ್ರತಸ್ಯ ಪ್ರಾಸಂಗಿಕತಾಃ” ವಿಷಯದಲ್ಲಿ ಭಾಷಣ ನೀಡಿದ ಉಡುಪಿ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧ ಸಂಸ್ಕ್ರತ ಮಹಾ ವಿದ್ಯಾಯಲಯದ ‘ಜೋತಿಷ್ಯ ಆಚಾರ್ಯ-1’ ತರಗತಿಯ ವಿದ್ಯಾರ್ಥಿ ‘ರಾಹುಲ ಮಿಶ್ರಾ’ ಅವರು, ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಸ್ವರ್ಣ ಪದಕ, ಪ್ರಶಸ್ತಿ ಪತ್ರ, ಹಾಗೂ ನಗದು ಬಹುಮಾನ ನೀಡಿ ಅವರನ್ನು ಪುರಸ್ಕರಿಸಲಾಗಿದೆ. ರಾಹುಲ ಮಿಶ್ರಾ ಅವರು ಒಡಿಶಾ ರಾಜ್ಯದ ಬರಗಡ ಜಿಲ್ಲೆಯವರಾಗಿದ್ದು, ಉಡುಪಿಯ ಸಂಸ್ಕ್ರತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಹೊರ ರಾಜ್ಯದ ವಿದ್ಯಾರ್ಥಿಯಾಗಿ ಕಾಲೇಜಿಗೆ ಗೌರವವನ್ನು ತಂದಿದ್ದಾರೆ.

