ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ರೂ 25ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ಸ್ವರ್ಣ ಪ್ರಭಾವಳಿ’ಯನ್ನು ಗುರುವಾರ ದೇವರಿಗೆ ಅರ್ಪಿಸಲಾಯಿತು.
ಸಮಿತಿ ಅಧ್ಯಕ್ಷ ಬಿ.ಗೋಪಾಲ ಸುವರ್ಣ, ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಎನ್.ಶಿವಶಂಕರ್, ಬಿ. ಮೋಹನ್, ವಿಶ್ವನಾಥ ಗಾಣದಪಡ್ಪು, ಲಿಂಗಪ್ಪ ಆಚಾರ್ಯ, ದಾಮೋದರ ರಾವ್, ಸೋಮನಾಥ ಮತ್ತಿತರರು ಇದ್ದರು.
