ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ವಲಯಾದ್ಯಕ್ಷರ ಅಧಿಕೃತ ಭೇಟಿ ಮತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸೆ.7 ರಂದು ಶ್ರೀ ಬಾಲನಿಕೇತನ ಕುಕ್ಕಿಕಟ್ಟೆ ಉಡುಪಿ ಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಅಶೋಕ್ ಚುಂತಾರ್,ರಾಷ್ಟೀಯ ನಿರ್ದೇಶಕ ಸಂದೀಪ್ ಕುಮಾರ್,ವಲಯ ಉಪಾದ್ಯಕ್ಷ ಜಬ್ಬಾರ್ ಸಾಹೇಬ್,ವಲಯಾಧಿಕಾರಿ ರಕ್ಷಿತ್ ಕುಡುಪು,ಅದ್ಯಕ್ಷ ಜಗದೀಶ್ ಶೆಟ್ಟಿ,ಕಿರಣ್ ಭಟ್,ರಪೀಕ್ ಖಾನ್,ಬಾಲನಿಕೇತನ ಕಾರ್ಯದರ್ಶಿ ರಾಮಚಂದ್ರ ಉಪಾದ್ಯ,ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು,ಶಕೀರ್,ಉದಯ್ ನಾಯ್ಕ ಮುಂತಾದವರಿದ್ದರು ಈ ಸಂದರ್ಭದಲ್ಲಿ ವಿವಿಧ ದಿನಬಳಕೆಯ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.
