ಬಂಟ್ವಾಳ: ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ 10ಲಕ್ಷ ರುಪಾಯಿ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿಯವರು ಹಸ್ತಾಂತರಿಸಿದರು. ಶುಕ್ರವಾರ ಮುಖ್ಯಮಂತ್ರಿಯವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಈ ಚೆಕ್ಕನ್ನು ಹಸ್ತಾಂರಿಸಲಾಯಿತು.
ಈ ಸಂದರ್ಭ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಸಂಘದ ನಿರ್ದೇಶಕರುಗಳಾದ ಚಂದ್ರಶೇಖರ ಟೈಲರ್, ಲೋಕನಂದ ಏಳ್ತಿಮಾರ್, ವೆಂಕಟ್ರಾಯ ಪ್ರಭು, ಸುರೇಶ ಶೆಟ್ಟಿ ಕಾಂದಿಲ, ಮಾಹಾಬಲ ಸಾಲ್ಯಾನ್,ಅರುಣಾ ಭಟ್, ವಿಜಯ ನೆಟ್ಲ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಆಚಾರ್ಯ ಹಾಗೂ ಪ್ರಕಾಶ್ ಅಂಚನ್ ಉಪಸ್ಥಿತರಿದ್ದರು.
