ಪೊಳಲಿ : ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಲೋಕಯುಕ್ತ ವಿಶ್ವನಾಥ ಶೆಟ್ಟಿ ಅವರು ಶನಿವಾರ ಭೇಟಿ ನೀಡಿದರು.ದೇವಳದ ವತಿಯಿಂದ ಪ್ರ.ಅರ್ಚಕರಾದ ಮಾಧವ ಭಟ್, ಪರಮೇಶ್ವರ ಭಟ್ ಪ್ರಸಾದ ನೀಡಿ ಗೌರವಿಸಿದರು. ಗಿರಿಪ್ರಕಾಶ್ ತಂತ್ರಿ ಹಾಗೂ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.
ಸಾವಿರ ಸೀಮೆಗೊಳಪಟ್ಟ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಇತ್ತೀಚೆಗೆ ಸಂಪೂರ್ಣ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದು ಸಂಪೂರ್ಣ ಶಿಲಾಮಯಗೊಂಡ ದೇವಸ್ಥನವನ್ನು ನೋಡಿ ಸಂತಷವ್ಯಕ್ತಪಡಿಸಿದರು. “ಬಹಳ ಸೊಗಸಾದ ಚಂದಾವಾಗಿ ಹೆಚ್ಚಿನ ಶ್ರದ್ಧಾ ಭಕ್ತಿಯಿಂದ ಈ ದೇವಸ್ಥಾನವನ್ನು ಜೀಣೋದ್ಧಾರಗೊಳಿಸಿದ ಎಲ್ಲಾ ಭಕ್ತಾಧಿಗಳನ್ನು ದೇವಿ ರಾಜರಾಜೇಶ್ವರಿ ಅನುಗ್ರಹಿಸಲಿ ಎಂದು ಈ ಸಂದರ್ಭದಲ್ಲಿ ಲೋಕಯುಕ್ತ ವಿಶ್ವನಾಥ ಶೆಟ್ಟಿ ಹೇಳಿದರು.”
ಹಿಂದುಳಿದವರ್ಗಗಳ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಶಿವಣ್ಣ, ಮೋಹನ್,ಲೋಕಯುಕ್ತ ಎಸ್ಪಿ ಎಂ .ಕೆ. ಮಾದಯ್ಯ, ಡಿ.ವೈ.ಎಸ್ಪಿಜಗದೀಶ್ ಎಂ, ಬಂಟ್ವಾಳ ಎಎಸ್ಪಿ ಸೈದುಲು ಅದಾವತ್,ಲೋಕಯುಕ್ತ ಇನ್ಸ್ಪೆಕ್ಟರ್ ಭಾರತಿ, ಲೋಕಯುಕ್ತ ಎಸೈ ಚಂದ್ರಶೇಖರ್,ಬಂಟ್ವಾಳ ಎಸೈ ಚಂದ್ರಶೇಖರ ಕಂದಾಯ ಇಲಾಖೆ ಆರ್ ಐ ರಾಮ, ಬಂಟ್ವಾಳ ಹೋಬಲಿಕಂದಾಯ ನಿರೀಕ್ಷಕ ನವೀನ್ ಬೆಂಜನಪದವು,ಸಿಬ್ಬಂದಿ ಸದಾಶಿವ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.


