ಪೊಳಲಿ: ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಂ ತಲಕಾಡು ಇಲ್ಲಿಯ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು ಬುಧವಾರ ಪೊಳಲಿಗೆ ಭೇಟಿನೀಡಿದರು. ದೇವಳದ ವತಿಯಿಂದ ಪ್ರಸಾದ ಸ್ವೀಕರಿಸಿದರು. ದೇವಳದ ವೆಂಕಟೇಶ್ ತಂತ್ರಿ , ಪವಿತ್ರಪಾಣಿ ಮಾದವಭಟ್,ನಾರಾಯಣ ಭಟ್, ಕೆ.ರಾಮ್ ಭಟ್,ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು. ಸ್ವಾಮೀಜಿಯವರು ಶಿಷ್ಯವೃಂದದವರೊಂದಿಗೆ ಆಗಮಿಸಿ ನೂತನವಾಗಿ ನಿರ್ಮಾಣಗೊಂಡ ಪೊಳಲಿಯ ಸನ್ನಿಧಿಯಲ್ಲಿ ದೇವರಷ್ಠೆ ಆಕರ್ಷಣೆಯ ಗರ್ಭಗುಡಿ ವೇಸರ ಶೈಲಿಯ ಶಿಲ್ಪಗಳು ನೋಡಿ ಸಂತಸವ್ಯಕ್ತಪಡಿಸಿದರು. ದೇವಳದ ತಂತ್ರಿ ಹಾಗೂ ಅರ್ಚಕರನ್ನು, ಕಾರ್ಯನಿವಱಹಣಾಧಿಕಾರಿಯನ್ನು ಶಾಲುಹೊದಿಸಿ ಗೌರವಿಸಿದರು. ಭಕ್ತಾಧಿಗಳನ್ನು ವಧುವರರನ್ನು ಆಶೀರ್ವದಿಸಿದರು. 
ಸ್ವಾಮೀಜಿಯವರು ಮಹಾಸಂಸ್ಥಾನಂ ತಲಕಾಡು ಮಠದಿಂದ ಜೂನ್ 9 ರಂದು ಭಾನುವಾರ ವಿಜಯ ಯಾತ್ರೆ ಕೈಗೊಂಡು ಸುಮಾರು ಹತ್ತು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿದರು.ಶ್ರೀ ಕ್ಷೇತ್ರ ಕೊಲ್ಲೂರು, ಕುಂಭಾಷಿ,ಕಮಲಶಿಲೆ,ಮಾರಣಕಟ್ಟೆ,ಶಂಕರನಾರಾಯಣ,ಮಂದಾರ್ತಿಕ್ಷೇತ್ರ,ಕೋಟಿಲಿಂಗೇಶ್ವರ,ಶ್ರೀ ಕ್ಷೇತ್ರ ಕಟೀಲು, ಪೊಳಲಿ ಶ್ರೀ ಕ್ಷೇತ್ರದ ದರ್ಶನ ಮಾಡಿ ಮಹಾಸಂಸ್ಥಾನಂ ತಲಕಾಡು ಮಠಕ್ಕೆ ತೆರಳಲಿದ್ದಾರೆ.


