Published On: Thu, Jun 27th, 2019

ಬಹು ಕಾಲದ ಬೇಡಿಕೆ ಈಡೇರಿಸಿದ ಶಾಸಕರು

ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪಾಲಡ್ಕ ಗ್ರಾಮದ ಕೇಮಾರು ವಾರ್ಡಿನ ಸೋನಾಡಿ, ಗುಂಡುಕಲ್ಲು, ಹಿತ್ತಿಲು , ಹಕ್ಕೇರಿ, ಅಂಗಡಿಬೆಟ್ಟು ಬೋವಾಡಿ ಈ ಭಾಗದಲ್ಲಿ ಕುಡಿಯುವ ನೀರಿಗೆ ಬಹುಕಾಲದ ಬೇಡಿಕೆಯಾಗಿತ್ತು. ಕೆಲವು ಬಾರಿ ನೀರಿನ ಅಭಾವದಿಂದ ಸುಮಾರು 2 ಕಿ.ಮಿ ದೂರ ಖಾಸಗಿ ಕೊಳವೆಬಾವಿಯಿಂದ ರಿಕ್ಷಾದ ಮೂಲಕ ನೀರು ತರಬೇಕಾಗಿತ್ತು.
IMG-20190627-WA0021
ಹಾಗೂ ಮೂಡಬಿದಿರೆಯ ರೋಟರಿಕ್ಲಬ್ ಟೆಂಪಲ್ ಟೌನ್ ಸಂಸ್ಥೆಯ ವತಿಯಿಂದ ಪ್ರತಿವಾರಕೊಮ್ಮೆ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯ ನಾಗರಿಕರು ಜಿಲ್ಲಾ ಪಂಚಾಯತಿ ಸದಸ್ಯ ಸುಚರೀತ ಶೆಟ್ಟಿ , ಶಾಸಕ ಉಮಾನಾಥ್ ಎ ಕೋಟ್ಯಾನ್ ರವರ ಗಮನಕ್ಕೆ ತಂದಿದ್ದು, ಈದಿಗ ಶಾಸಕರು ಸಾರ್ವಜನಿಕ ಕೊಳವೆಬಾವಿಗೆ  ಅನುದಾನ ಒದಗಿಸಿ, ಸಾರ್ವಜನಿಕರಿಗಾಗಿ ಹಕ್ಕೇರಿ ಬಳಿ ಕೊಳವೆಬಾವಿಯನ್ನು ಕೊರೆಯಿಸಲಾಗಿದೆ.ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಶಾಸಕರ ಕಾರ್ಯಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
IMG-20190627-WA0020
ಅನುದಾನ ಒದಗಿಸಿದ ಶಾಸಕ‌‌ ಉಮಾನಾಥ್ ಎ ಕೊಟ್ಯಾನ್,  ಕಾಮಗಾರಿ ಪ್ರಗತಿಗೆ ಸಹಕರಿಸಿದ ಜಿಲ್ಲಾ ಪಂಚಾಯತಿ ಸದಸ್ಯರಾದ ಸುಚರೀತ ಶೆಟ್ಟಿಯವರಿಗೆ,  ಪುತ್ತಿಗೆ ಶಕ್ತಿ ಕೇಂದ್ರದ ಅಧ್ಯಕ್ಷಅಜಯ್ ರೈ ಹಾಗೂ ಮುಲ್ಕಿ ಮೂಡಬಿದಿರೆಯ ಎಸ್ಟಿ ಮೊರ್ಚಾದ ಅಧ್ಯಕ್ಷ ಕಿಶೋರ್ ಕುಮಾರ್ ನಾಯ್ಕ್ ಇವರಿಗೆ ಧನ್ಯವಾದಗಳು.
IMG-20190627-WA0019

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter