ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಸೀಯಾಳಾಭಿಷೇಕ ನಡೆಸಲಾಯಿತು.

ದೇವಸ್ಥಾನದ ಕಾರ್ಯದರ್ಶಿ ಶೇಖರ್ ಹೆಗ್ಡೆ, ಮೊಕ್ತೇಸರ ಶ್ರೀಧರ್ ಹೆಗ್ಡೆ, ರಾಘವ ಹೆಗ್ಡೆ, ಪುಷ್ಪರಾಜ ಹೆಗ್ಡೆ, ಹೆಗ್ಗಡೆ ಸಂಘದ ಸದಸ್ಯ ಸುಧಾಕರ ಹೆಗ್ಡೆ, ಮಹಿಳಾ ಸಂಘದ ಸದಸ್ಯೆ ಸುಗಂಧಿ ಹೆಗ್ಡೆ, ಸ್ಥಳಿಯರಾದ ರಾಜೇಶ್ ಕುಮಾರ್, ವಿಜಯ್ ಕುಮಾರ್, ಗಿರೀಶ್ ಕುಮಾರ್ ಹಾಗೂ ಸಾರ್ವಜನಿಕರು ಭಾಗವಹಿಸಿದರು
