ಬಂಟ್ವಾಳ : ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಾಧನಾ ಸಭಾಭವನದಲ್ಲಿಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ೧೦ ದಿನದ ಸಮಗ್ರ ಶಿಶುಶಿಕ್ಷಣ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ವಿದ್ಯಾಗೌರಿ ಪುತ್ತೂರು ರವರುದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಒಡಿಯೂರು ಕ್ಷೇತ್ರದ ಸಾದ್ವಿ ಶ್ರೀ ಮಾತನಂದಮಯಿ ಆರ್ಶಿವಾಚನ ನೀಡಿದರು.ಸುರೇಶ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಡಾ||ಪ್ರಭಾಕರ ಭಟ್ಕಲ್ಲಡ್ಕ, ನಾರಾಯಣ ಸೋಮಾಯಾಜಿ , ವಸಂತ ಮಾಧವ ಹಾಗೂ ಶಿಶು ಶಿಕ್ಷಣದ ಪ್ರಮುಖರಾದ ಅನ್ನಪೂರ್ಣ, ಶಾಂತ, ಗಂಗಾ ಉಪಸ್ಥಿತರಿದ್ದರು.ಒಟ್ಟು ೪೯ ಶಿಬಿರಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಶೋಭಾ ನಿರೂಪಿಸಿ, ಲಕ್ಷಿತಾ ಸ್ವಾಗತಿಸಿ, ವಾಣಿ ವಂದಿಸಿದರು.
