ಕಲ್ಲಡ್ಕ ನರೇಂದ್ರಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ
ಕಲ್ಲಡ್ಕ :ವ್ಯಕ್ತಿಯೊಬ್ಬ ಯಾವ ಮಟ್ಟಕ್ಕೆಏರಿದರೂಕೂಡಾದೇಶದ ಮುಂದೆಎಲ್ಲರೂ ಸಮಾನರು.ತಾನುಇರುವ ಹುದ್ದೆಯಜವಾಬ್ದಾರಿಅರಿತು ವ್ಯವಹರಿಸಿದರೆ ಆತ ಶ್ರೇಷ್ಟನಾದನುಎಂದು ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು. ಅವರುಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿಇಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದಕಾರ್ಯಕ್ರಮ ನಡೆಸಿದರು.
ಶಿಶುಮಂದಿರದ ಚಟುವಟಿಕೆಗಳನ್ನು ವೀಕ್ಷಿಸಿದ ಅವರುಇಲ್ಲಿಜೀವನಕೌಶಲ್ಯದ ಶಿಕ್ಷಣವನ್ನು, ಸಂಸ್ಕಾರ ಹಾಗೂ ಭಾರತೀಯ ನೆಲೆಗಟ್ಟಿನಆಧಾರದಲ್ಲಿ ನೀಡಲಾಗುತ್ತಿದೆ.ಸಂಸ್ಕೃತದ ವ್ಯವಹಾರಉತ್ತರ ಭಾಗಕ್ಕಿಂತ ಹೆಚ್ಚು ಬಳಕೆಯಲ್ಲಿದೆ ಎಂದರು.ದಕ್ಷಿಣ ಭಾರತಜನರ ಬಗ್ಗೆ ನನಗಿದ್ದ ಭಾವನೆ ನನಗೀಗ ಬದಲಾಗಿದೆ. ಇಲ್ಲಿನಜನ ಪ್ರೇಮಪೂರ್ಣ, ಸೌಹಾರ್ದಯುತ, ಭಾವನಾ ಜೀವಿಗಳಾಗಿರುವುದು ನನ್ನಅರಿವಿಗೆ ಬಂದಿದೆ.ನರೇಂದ್ರ ಮೋದಿಯವರದ್ದು ಸಮಾಜ ಸಮರ್ಪಕ ಬದುಕು, ದೇಶದ ಬಗೆಗಿನ ಅವರ ಕಾಳಜಿ ದೊಡ್ಡದು. ಬಾಲ್ಯದಿಂದಲೂ ಪ್ರತಿಯೊಂದುಕಾಲದಲ್ಲೂ ಶಿಶ್ತುಬದ್ಧ ಜೀವನ ನಡೆಸಿದರು. ನಮಗ್ಯಾರಿಗೂಅವರ ಹುದ್ದೆಯ ನಡುವೆ ನಾವೂ ಗುರುತಿಸಿಕೊಳ್ಳುವಂತಾಗಬೇಕು ಎಂದು ಅನಿಸಲೇ ಇಲ್ಲ. ಆದರೆ ಸಮಾಜ ನಮ್ಮನ್ನು ವಿಶೇಷ ಆದರದಿಂದಕಾಣುತ್ತಿರುವುದರ ಬಗ್ಗೆ ಸಂತೋಷವಿದೆ.ಆದರೆಎಲ್ಲೂ ನಮ್ಮಕುಟುಂಬವು ಅವರಜವಾಬ್ದಾರಿ ನಿರ್ವಹಣೆಗೆತೊಡಕಾಗದಂತೆ ಎಚ್ಚರವಹಿಸಿದೆ.ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.

ಅವರೊಂದಿಗೆಕುಟುಂಬದಜ್ಯೋತಿಷ್ಯರಾದ ಶಿವಗಿರಿ ಮಹಾರಾಜ್, ತೆಲಂಗಾಣ ಸಂಸ್ಕೃತ ಶಿಶುಮಂದಿರದ ಪ್ರವೀಣ್ಕೊರೊಲ್ಪೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಶ್ರೀ ಸುನಿಲ್ ಕುಲಕರ್ಣಿ, ಉದ್ಯಮಿ ದೀಪಕ್ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷಡಾ| ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ಎನ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದಕೃಷ್ಣಪ್ರಸಾದ್ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ಧನ್ಯವಾದಗೈದರು.




