ವೇದವ್ಯಾಸಧ್ಯಾನಮಂದಿರದಲ್ಲಿ ೨೦೧೯-೨೦ ನೇ ಸಾಲಿನ ವಿದ್ಯಾರ್ಥಿಗಳ ದೀಪ ಪ್ರದಾನಕಾರ್ಯಕ್ರಮ ನಡೆಸಲಾಯಿತು
ಕಲ್ಲಡ್ಕ : ದೀಪ ಪ್ರದಾನ ದಿನಾಂಕ ೦೨/೦೩/೨೦೨೧ ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ೨೦೧೯-೨೦ ನೇ ಸಾಲಿನ ವಿದ್ಯಾರ್ಥಿಗಳ ದೀಪ ಪ್ರದಾನಕಾರ್ಯಕ್ರಮ ನಡೆಸಲಾಯಿತು.
“ಭಾರತ ಸನಾತನದೇಶ, ಈಗ ನಾಯಕನಾಗಿ ಭಾರತಎದ್ದು ನಿಂತಿದೆ, ಈ ಶಾಲೆಯಲ್ಲಿಕೇವಲ ವಿಷಯಗಳ ಶಿಕ್ಷಣ ನೀಡುತ್ತಿಲ್ಲ, ಜೊತೆಗೆತನ್ನಜೀವನ ಹೇಗಿರಬೇಕು ಎಂಬ ಬದುಕಿನ ಶಿಕ್ಷಣ ನೀಡುತ್ತಿದೆೆ. ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವ ಶಿಕ್ಷಣ ಇಂದಿನ ಪೀಳಿಗೆಗೆ ದೊರಕಬೇಕು ಎಂಬ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಸಂಸ್ಥೆಕರ್ಯನಿರ್ವಹಿಸುತ್ತಿದೆ.
ತಾನುಕಲಿತ ಮೌಲ್ಯವನ್ನು, ಸಂಸ್ಕಾರವನ್ನು ಪೌಢ ಶಿಕ್ಷಣಕ್ಕೆ ತೆರಳುತ್ತಿರುವ ೭ನೇ ತರಗತಿಯ ವಿದ್ಯಾರ್ಥಿಗಳು ದೀಪÀವನ್ನುಕಿರಿಯ ವಿದ್ಯಾರ್ಥಿಗಳಿಗೆ ಪ್ರಧಾನ ಮಾಡುವುದುಈ ಕಾರ್ಯಕ್ರಮದ ಮೂಲ ಚಿಂತನೆ” ಎಂದುಕಾರ್ಯಕ್ರಮದಅಧ್ಯಕ್ಷತೆವಹಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರುಇದರಅದ್ಯಕ್ಷರಾದಡಾ|| ಪ್ರಭಾಕರ್ ಭಟ್ಕಲ್ಲಡ್ಕತಿಳಿಸಿದರು.

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ೭ನೇ ತರಗತಿಯ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು. ಕಿರಿಯ ವಿದ್ಯಾರ್ಥಿಗಳು ಪೌಢ ಶಾಲೆಗೆ ಹೊರಟು ನಿಂತಿರುವ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಆಶೀರ್ವಾದ ಪಡೆದುಕೊಂಡರು. ನಂತರ ೭ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊAಡರು. ೬ನೇ ತರಗತಿಯಆದಿಶ್ರೀ ರೈ ಪ್ರೇರಣಾಗೀತೆ ಹಾಡಿದಳು. ಕಾರ್ಯಕ್ರಮದಲ್ಲಿಇಫ್ಕೋಮತ್ತು ಸದಾಸ್ಮಿತ ಪೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟ್ಯಾಪ್ ವಿತರಣೆ ನಡೆಯಿತು.

ವೇದಿಕೆಯಲ್ಲಿಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿಮಿಟೆಡ್ಇದರ ಮುಖ್ಯ ವ್ಯವಸ್ಥಾಪಕರಾದರಜನೀಶ್ ಪಾಂಡೆ, ಸದಾಸ್ಮಿತ ಫೌಂಡೇಶನ್ ಸಂಸ್ಥೆಯಅಧ್ಯಕ್ಷರಾದ ಡಿ.ವಿ ಶಿವರಾಮಗೌಡ, ಇಫ್ಕೋದರಾಜ್ಯ ಮಾರ್ಕೆಟಿಂಗ್ ಮ್ಯಾನೇಜರ್ರಾಗಿರುವಡಾ| ನಾರಾಯಣ ಸ್ವಾಮಿ, ಸದಾಸ್ಮಿತ ಫೌಂಡೇಶನ್ ಸಂಸ್ಥೆಯಕಾರ್ಯಾಧ್ಯಕ್ಷರಾಗಿರುವಕಾರ್ತಿಕ್ಗೌಡ, ಸದಾಸ್ಮಿತ ಫೌಂಡೇಶನ್ನ ಸಂಘಟನಾ ಕಾರ್ಯದರ್ಶಿಯಾಗಿರುವ ಚೇತನ್, ರಾಷ್ಟç ಸೇವಿಕಾ ಸಮಿತಿಯಕರ್ನಾಟಕದಕ್ಷಿಣ ಪ್ರಾಂತಕಾರ್ಯಕಾರಿಣಿ ಸದಸ್ಯರಾಗಿರುವ ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಮಾಜಿಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದಚೆನ್ನಪ್ಪಆರ್ಕೋಟ್ಯಾನ್, ಮಲ್ಲಿಕಾ ಶೆಟ್ಟಿ ಹಾಗೂ ಮುಖೋಪಾಧ್ಯಾಯರಾದರವಿರಾಜ್ಕಣಂತೂರು ಉಪಸ್ಥಿತರಿದ್ದರು.



