ಕೈಕಂಬ:ರಾಜ್ಯಶಾಸ್ತ್ರ ವಿಭಾಗ ಮತ್ತುಚುನಾವಣಾ ಸಾಕ್ಷರತಾ ಸಂಘ, ಮಾನವಿಕ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಆಶ್ರಯದಲ್ಲಿರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.ಇದರ ಘನ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲರಾದ ಡಾ.ಲತಾ ಕೆ.ವಹಿಸಿಕೊಂಡಿದ್ದರು.
ಮತದಾರರ ಜಾಗೃತಿ ಕಾರ್ಯಕ್ರಮದ ಬಗ್ಗೆ ಕಾಲೇಜಿನ ಉಪಪ್ರಾಂಶುಪಾಲರಾದ ಗಣೇಶ್ ಬಿ.ಎಂ., ವಾಣಿಜ್ಯ ಶಾಸ್ತ್ರ ಮುಖ್ಯಸ್ಥರಾದ ಕಮಲಾಕ್ಷಿ, ಕಾಲೇಜಿನ ಗ್ರಂಥಪಾಲಕರಾದ ವಿಶ್ವನಾಥ ಪೂಜಾರಿ ರೆಂಜಾಳ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶಾಲಿನಿ ಇವರುಗಳು ಮತದಾನ ಅರಿವು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಮಾನವಿಕ ಸಂಘದ ವತಿಯಿಂದ ಮಣಿಪಾಲ ಆರೋಗ್ಯ ಸುರಕ್ಷಕಾರ್ಡ್ ವಿತರಣೆ ಮಾಡಲಾಯಿತು.ಉಪನ್ಯಾಸಕಿ ಕು.ಚೇತನ ಸ್ವಾಗತಿಸಿದರು. ಕು.ಅಶ್ವಿನಿ ತೃತೀಯ ಬಿ.ಎ. ಕಾರ್ಯಕ್ರಮ ನಿರೂಪಿಸಿ ಹಾಗೂ ಕು.ತೇಜಾಕ್ಷಿತೃತೀಯ ಬಿ.ಎ. ವಂದಣಾರ್ಪಣೆಗೈದರು.
