ಬಂಟ್ವಾಳ: ಶ್ರೀ ದೇವಿ ಭಜನಾ ಮಂದಿರ , ಬೊಳ್ಳುಕಲ್ಲು ಪೆರಾಜೆ, ಸತ್ಯಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಬುಡೋಳಿ ಇದರ ಜಂಟಿ ಆಶ್ರಯದಲ್ಲಿ ಶ್ರೀದೇವಿ ಭಜನಾ ಮಂದಿರ ದ ವರ್ಧಂತ್ಯುತ್ಸವದ ಸಹಾಯರ್ಥವಾಗಿ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟ ಅಡ್ಲಬೆಟ್ಟು ಕ್ರೀಡಾಂಗಣ ದಲ್ಲಿ ಅದಿತ್ಯವಾರ ನಡೆಯಿತುಈ ಪಂದ್ಯಾಟದ ಉದ್ಘಾಟನೆಯನ್ನು ಪೆರಾಜೆ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ! ಶ್ರೀ ನಾಥ್ ಅಳ್ವ ಪೆರಾಜೆ ಗುತ್ತು ನೆರವೇರಸಿದರು. 
ಈ ಸಂಧರ್ಭದಲ್ಲಿ ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶ್ರೀ ದೇವಿ ಟ್ರಸ್ಟ್ ನ ಅಧ್ಯಕ್ಷ ಮಾದವ ಪಾಳ್ಯ, ಶ್ರೀ ದೇವಿ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ್ ಎಸ್.ಪಿ, ಪ್ರಮುಖರಾದ ಡಾ! ಅನೂಷ್ ನ್ಯಾಕ್, ಸತ್ಯ ಶ್ರೀ ಗೆಳೆಯ ರ ಬಳಗ ಅಧ್ಯಕ್ಷ ದಿನಕರ ಪೂಜಾರಿ, ಶ್ರೀ ದೇವಿ ಭಜನಾ ಮಂಡಳಿ ಅಧ್ಯಕ್ಷ ಯತಿರಾಜ್ ಪೆರಾಜೆ ಮತ್ತಿತರು ಉಪಸ್ಥಿತರಿದ್ದರು.
