ಗುರುಪುರ : ಜೀರ್ಣೋದ್ಧಾರದ ಕೊನೆಯ ಹಂತದಲ್ಲಿರುವ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲಾಗುವ ಕೊಡಿಮರಕ್ಕೆ(ಧ್ವಜಸ್ತಂಭ) ಭಾನುವಾರ ಬೆಳಿಗ್ಗೆ 10 ಗಂಟೆಗೆ ದೈವಸ್ಥಾನದಲ್ಲಿ `ತೈಲಾಧಿವಾಸ’ ಪೂಜಾ ಕಾರ್ಯಕ್ರಮ ಜರುಗಲಿದೆ.
ಕೊಡಿಮರಕ್ಕೆ ಅರ್ಪಿಸಲು ದೈವಸ್ಥಾನದ ವತಿಯಿಂದ ಶುದ್ಧ ಎಳ್ಳೆಣ್ಣೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.
