ನವದೆಹಲಿ: ಭೀಕರ ಮಳೆ, ಪ್ರವಾಹಕ್ಕೆ ಕಾಶ್ಮೀರ ಅಕ್ಷರಶಃ ಮುಳುಗಿ ಹೋಗಿದ್ದು, ಕಾಶ್ಮೀರಿಗಳನ್ನು ರಕ್ಷಿಸಲು ಭಾರತೀಯ ಯೋಧರಲ್ಲದೆ ಬೇರ್ಯಾರೂ ಬಂದಿಲ್ಲ. ಕಾಧಶ್ಮೀರಿಗಳಲ್ಲಿ ಧ್ವೇಷ ಬಿತ್ತುತ್ತಾ ಭಾರತದ ವಿರುದ್ಧ ಹೊಗೆಹಾರುತ್ತಾ ಕಾಶ್ಮೀರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪ್ರತ್ಯೇಕತವಾದಿಗಳು ಅಲ್ಲಿಂದ ಕಂಬಿಕಿತ್ತಿದ್ದಾರೆ.
ಆದರೆ ಭಾರತೀಯ ಯೋಧರು ಯಾವುದೇ ಭೇದಭಾವವಿಲ್ಲದೇ ತಮ್ಮ ಜೀವದ ಹಂಗು ತೊರೆದು ಪ್ರತಿಯೊಬ್ಬರನ್ನೂ ರಕ್ಷಿಸಲು ಅವಿರತ ಶ್ರಮ ಹಾಕುತ್ತಿದ್ದಾರೆ. ಕಾಶ್ಮೀರಿ ಜನರಿಗೆ ಯೋಧರು ದಿನೇದಿನೇ ಸಹ್ಯವಾಗುತ್ತಿದ್ದಾರೆ. ಭಾರತೀಯ ಯೋಧರು ಈಗಾಗಲೇ ಇಲ್ಲಿ 50 ಸಾವಿರಕ್ಕೂ ಹೆಚ್ಚು ಜನರನ್ನ ಪ್ರಾಣಾಪಾಯದಿಂದ ಪಾರು ಮಾಡಿದೆ. ಪ್ರವಾಹದಲ್ಲಿ ಸಿಲುಕಿರುವ ಹಲವರಿಗೆ ಹೆಲಿಕಾಪ್ಟರ್ ಮೂಲಕ ಆಹಾರಗಳನ್ನ ಒದಗಿಸುತ್ತಿದ್ದಾರೆ.




