ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ನಿರ್ಮಿಸಲಾದ ರಿಕ್ಷಾ ತಂಗುದಾಣದ ಮೇಲ್ಚಾವಣಿ ಮತ್ತು ಇಂಟರ್ಲಾಕ್ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಉದ್ಘಾಟಿಸಿದರು.
ಪ್ರಗತಿಪರ ಕೃಷಿಕ ದಾಸು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಿರ್ತಾಡಿ ಗ್ರಾ.ಪಂ ಸದಸ್ಯ ವಿವಿಯನ್ ಪಿಂಟೋ, ತಾ.ಪಂ ಮಾಜಿ ಸದಸ್ಯರಾದ ರುಕ್ಕಯ ಪೂಜಾರಿ, ಪ್ರಕಾಶ್ ಪಿ., ವಕೀಲರಾದ ಹರೀಶ ಪಿ, ಪದ್ಮ ಪ್ರಸಾದ್ ಜೈನ್, ಪುರಸಭಾ ಸದಸ್ಯ ಆಲ್ವಿನ್ ಮಿನೇಜಸ್, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಸುಂದರ ಪೂಜಾರಿ, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ನಾಗೇಶ್ ಶೆಟ್ಟಿ , ಕಾಂಗ್ರೆಸ್ ಕಾರ್ಯಕರ್ತರಾದ ಜಕ್ರಿ ಯೂಸಫ್, ಪಿಯೂಸ್ ಮೊಂತೆರೋ, ಇಂಟಕ್ ಅಧ್ಯಕ್ಷಅಲ್ವಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿವಾನಂದ ಪಾಂಡ್ರು ಕಾರ್ಯಕ್ರಮ ನಿರೂಪಿಸಿದರು.

