ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕøತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2018’ ನವಂಬರ 15, ಗುರುವಾರ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಅಧ್ಯಕ್ಷತೆಗೆ ಗಡಿನಾಡು ಕಾಸರಗೋಡಿನ ಬಹುಮುಖ ಪ್ರತಿಭಾನ್ವಿತೆ ವಿದ್ಯಾನಗರದ ಚಿನ್ಮಯ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಟಿ ರೈ ಪೆರ್ಲ ಇವರು ಆಯ್ಕೆಯಾಗಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಗೆ ಉಜಿರೆಯ ಬೆಳ್ತಂಗಡಿ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭಾರ್ಗವಿ ಶಬರಾಯ ಇವರನ್ನುಆಯ್ಕೆ ಮಾಡಲಾಗಿದೆಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

VIDYARTHI SIRI (4)

ಸಮ್ಮೇಳನದಲ್ಲಿ ನಡೆಯುವ ಸಂವಾದ ಗೋಷ್ಠಿಯ ಅಧ್ಯಕ್ಷತೆಗೆ ಉಜಿರೆಎಸ್ ಡಿ ಎಂ ಪಿಯುಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಾಮ್ ಪ್ರಸಾದ್ ಹಾಗೂ ಸಮಾರೋಪ ಭಾಷಣಕ್ಕೆ ಆಳ್ವಾಸ್‍ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಇವರನ್ನುಆಯ್ಕೆ ಮಾಡಲಾಗಿದೆ. ವಿಶೇಷೋಪನ್ಯಾಸ ನೀಡಲು ಬೆಳ್ತಂಗಡಿ ವಾಣಿ ಪದವಿ ಪೂರ್ವಕಾಲೇಜಿನ ಪ್ರಜ್ಞಾ ಪ್ರಭು, ಒಳಕಾಡು ಸರಕಾರೀ ಪಿಯುಕಾಲೇಜಿನ ವಿದ್ಯಾರ್ಥಿ ನಚಿಕೇತ ನಾಯಕ್, ಆಳ್ವಾಸ್ ಪ್ರೌಢಶಾಲೆಯ ಭಾರತೀ ಶಿವಾನಂದ ನಾಯಕ್ ಇವರನ್ನು ಆರಿಸಲಾಗಿದೆ.ಸಂವಾದ ಗೋಷ್ಠಿಯಲ್ಲಿ ಮೂಡುಬಿದಿರೆ ರೋಟರಿ ಪ್ರೌಢಶಾಲೆಯ ಪ್ರದ್ಯುಮ್ನ ಮೂರ್ತಿಕಡಂದಲೆ, ಆಳ್ವಾಸ್ ಪ್ರೌಢಶಾಲೆಯ ಭಕ್ತಿಶ್ರೀ, ಉಜಿರೆಯ ಎಸ್‍ಡಿಎಂ ಪದವಿಪೂರ್ವಕಾಲೇಜಿನ ಪೂರ್ಣಿಮಾ ಹಾಗೂ ಆಳ್ವಾಸ್ ಪಿಯುಕಾಲೇಜಿನ ಗುಣೇಶ್ ಭಾರತೀಯಇವರನ್ನುಆಯ್ಕೆ ಮಾಡಲಾಗಿದೆ.

VIDYARTHI SIRI (3)
ಇತ್ತೀಚೆಗೆ ವಿದ್ಯಾಗಿರಿಯಲ್ಲಿ ನಡೆದಆಯ್ಕೆ ಪ್ರಕ್ರಿಯೆಯಲ್ಲಿಲಿಖಿತ ಪರೀಕ್ಷೆ, ಆಶು ಭಾಷಣ ಹಾಗೂ ಸಂದರ್ಶನ ಹಾಗೂ ಪ್ರಮಾಣ ಪತ್ರ ಪರಿಶೀಲನೆಯ ಮೂಲಕ ಈ ಆಯ್ಕೆಗಳು ನಡೆದಿವೆ. .ಅಂಡಾರುಗುಣಪಾಲ ಹೆಗ್ಡೆ, ಡಾ.ಧನಂಜಯ ಕುಂಬ್ಳೆ ಜೀವನ್‍ರಾಂ ಸುಳ್ಯ, ಶ್ರೀಧರ ಜೈನ್ ಮತ್ತುರಾಮಕೃಷ್ಣ ಶಿರೂರು ಮೌಲ್ಯ ಮಾಪಕರಾಗಿ ಭಾಗವಹಿಸಿದ್ದರು.

VIDYARTHI SIRI (1)

 

VIDYARTHI SIRI (2)

 

ಸನ್ನಿಧಿ ಟಿ ರೈ ಪೆರ್ಲ ಪರಿಚಯ: ಸಾಹಿತ್ಯ, ಯಕ್ಷಗಾನ, ಸಂಗೀತ, ಭರತನಾಟ್ಯ, ಕರಾಟೆ, ಅಂಕಣ ಬರಹಇತ್ಯಾದಿ ಬಹುವಿಧಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಸನ್ನಿಧಿ ಟಿ ರೈ ಪೆರ್ಲ ಕಾಸರಗೋಡಿನ ಚಿನ್ಮಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ. ತಂದೆ ತಾರಾನಾಥರೈ. ತಾಯಿ ರಾಜಶ್ರೀ ತಾರಾನಾಥರೈ.ಸಾಹಿತ್ಯಕ್ಷೇತ್ರದಲ್ಲಿಕಥೆ, ಕವಿತೆ, ಅಂಕಣ ಬರಹಗಳ ಮೂಲಕ ಈಗಾಗಲೇ ಪ್ರಸಿದ್ಧಿ ಪಡೆದಿದ್ದಾರೆ.ಕನ್ನಡಇಂಗ್ಲಿಷ್ ಮತ್ತು ತುಳುವಿನಲ್ಲಿ ಬರೆಯುತ್ತಿರುವ ಸನ್ನಿಧಿ ಚಿಲಿಪಿಲಿ ಚಿತ್ತಾರ (ಕನ್ನಡ), ಶೇಡ್ಸ್ (ಇಂಗ್ಲಿಷ್) ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸ್ವಾಮಿಚಿನ್ಮಯಾನಂದರ ನೀತಿ ಬೋಧನೆಗಳು ಇವರಅಂಕಣ ಬರಹ.ಯಕ್ಷಗಾನದಲ್ಲಿ ಭಾಗವತಿಕೆ ಮತ್ತು ವೇಷಧಾರಿಯಾಗಿಯೂ ತೊಡಗಿಸಿಕೊಂಡಿರುವ ಈಕೆ ಅಮರಾವತಿ ನಿರ್ಮಾಣ ಎಂಬ ಯಕ್ಷಗಾನ ಪ್ರಸಂಗವನ್ನು ಬರೆದಿದ್ದುಅದರ ಬಿಡುಗಡೆ ಹಾಗೂ ಪ್ರದರ್ಶನ ಅ.19 ರಂದು ಬನಾರಿಯಲ್ಲಿ ನಡೆಯಲಿದೆ.ಆಕಾಶವಾಣಿಯಲ್ಲಿ ಕವಿತೆಗಳು ಪ್ರಸಾರಗೊಂಡಿದೆ.

ವಿಶ್ವ ತುಳುವೆರೆ ಆಯನದ ವಿದ್ಯಾರ್ಥಿ ಕವಿಗೋಷ್ಠಿಯಅಧ್ಯಕ್ಷತೆ, ಕೇಂದ್ರ ಸಾಹಿತ್ಯಅಕಾಡೆಮಿ ಆಯೋಜಿಸಿದ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿಕವಿತಾ ವಾಚನ, ಆಳ್ವಾಸ್ ವಿದ್ಯಾರ್ಥಿಸಿರಿಯ ಕವಿಗೋಷ್ಠಿಯಅಧ್ಯಕ್ಷತೆ ಮೊದಲಾದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕರಾಜೋತ್ಸವ ಸಾಧಕ ಪುರಸ್ಕಾರ, ಭಾಂದವ್ಯ ಪುರಸ್ಕಾರ-2014, ಕೇರಳ ಸರಕಾರ ತುಳು ಅಕಾಡಮಿಯ ಸನ್ಮಾನ, ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿ, ‘ಎಸಲ್’ಸಿ.ಡಿ ಯ ಹಾಡಿಗಾಗಿಡಾ.ವೀರೇಂದ್ರ ಹೆಗ್ಗಡೆಯವರಿಂದಉಡುಗೊರೆ, ಎಕ್ಸಲೆನ್ಸಿಅವಾರ್ಡ್‍ರೇಡಿಯೋ ಸಾರಂಗ್ ನವರಿಂದ ಒಡಿಯೂರುಕ್ಷೇತ್ರದಲ್ಲಿ ನಡೆದ ಲಲಿತಾಪಂಚಮಿಯಧರ್ಮಸಭೆಯಲ್ಲಿ ಶ್ರೀಗಳಿಂದ ‘ಪ್ರತಿಭಾ ಪುರಸ್ಕಾರ”ಉಡುಪಿ ಮಠದ ವಿದ್ಯಾವಲ್ಲಭತೀರ್ಥರಿಂದ ಸನ್ಮಾನ, ಸುಳ್ಯ ರಂಗಮನೆಯಗೌರವ ಸನ್ಮಾನ, ತುಳುನಾಡೋಚ್ಚಯ ಪ್ರಶಸ್ತಿ, ಚಿನ್ಮಯ ಮಿಷನ್‍ರಿಜಿನಲ್ ಹೆಡ್ ಸ್ವಾಮೀ ವಿವಿಕ್ತಾನಂದ ಸರಸ್ವತಿಯವರಿಂದ ಸನ್ಮಾನ.ಯಕ್ಷಸಿರಿ ಪ್ರತಿಭಾ ಪುರಸ್ಕಾರ ಮೊದಲಾದ ಹಲವು ಗೌರವಗಳು ಇವರಿಗೆ ಸಂದಿವೆ. ಕರಾಟೆಯಲ್ಲಿ ಹಲವು ಚಿನ್ನ ಬೆಳಿ ಪದಕಗಳನ್ನು ಪಡೆದು ಪ್ರಸ್ತುತಕರಾಟೆ ಶಿಕ್ಷಕಿಯಾಗಿದ್ದಾರೆ. ಸಂಗೀತದಲ್ಲಿ 5ನೇ ತರಗತಿಯಲ್ಲಿರುವಾಗಲೇಜೂನಿಯರ್ ಪರೀಕ್ಷೆಯಲ್ಲಿತೇರ್ಗಡೆ ಹೊಂದಿದ್ದಾರೆ.ಕಾರ್ತಿಕೇಯ ಚಾರಿಟೆಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನುಕಟ್ಟಿಕೊಂಡುಅದರ ಮೂಲಕ ನಾಟಕತರಬೇತಿ ಮತ್ತು ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ‘ಸೇಫ್‍ಝೋನ್’ ಎಂಬ ಶಿಬಿರ ನಡೆಸುತ್ತಿದ್ದಾಳೆ.

By suddi9

Leave a Reply

Your email address will not be published. Required fields are marked *