ಬಂಟ್ವಾಳ : ನರಿಕೊಂಬು ಗ್ರಾಮ ಕರಣಿಕ ನಾಗರಾಜರವರನ್ನು ವರ್ಗಾವಣೆಗೊಳಿಸುವ ವಿಷಯದ ವಿರುದ್ಧ ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ನೇತೃತ್ವದಲ್ಲಿ ತಹಶೀಲ್ದಾರ್ ಪುರಂಧರ ಹೆಗಡೆ ಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ತಾ.ಪಂ.ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು, ನರಿಕೊಂಬು ಗ್ರಾ.ಪಂ.ಸದಸ್ಯರಾದ ಮಾಧವ ಪೂಜಾರಿ, ವಿಶ್ವನಾಥ ಪೂಜಾರಿ, ಮೋಹಿನಿ, ಸುಲೈಮಾನ್, ಜುಬೈದಾ, ಬೇಬಿ, ಚಂದ್ರಾವತಿ ನಿನ್ನಿಪಡ್ಪು, ಚಂದ್ರಾವತಿ ನಾಯ್ಕ, ವಿಶಾಲಾಕ್ಷಿ ಶಂಭೂರು, ಗೀತಾ, ವಿನಯ, ರಂಜೀತ್ ಕೆದ್ದೇಲು ಮತ್ತು ಅಲ್ಫೋನ್ಸ್ ಮೆನೆಜಸ್,ಅಲ್ಬರ್ಟ್ ಮೆನೆಜಸ್, ಪ್ರಸಾದ್ ಕರ್ಬೆಟ್ಟು, ಸಾಯಿರಾಮ್ ನಾಯಕ್, ಅರುಣ್ ಶೆಟ್ಟಿ, ದಿವಾಕರ ಏಲಬೆ ಮತ್ತಿತರರು ಉಪಸ್ಥಿತರಿದ್ದರು.
