ಮೂಡುಬಿದಿರೆ: ಹೊಸಬೆಟ್ಟುನಲ್ಲಿ ಹಣದಾಸೆಗೆ ಒಡಹುಟ್ಟಿದ ಅಣ್ಣನನ್ನು ಸ್ನೇಹಿತರೊಂದಿಗೆ ಸೇರಿ ಅಮಾನುಷವಾಗಿ ಕೊಲೆ ಮಾಡಿ ಬಳಿಕ ಶವವನ್ನು ನದಿಗೆಸೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಸಿದ್ಧಕಟ್ಟೆಯ ಪ್ರಸಾದ್ ಯಾನೆ ಪಚ್ಚು(35)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಂಗಳವಾರ ಇಲ್ಲಿನ ಕೋರ್ಟ್‍ಗೆ ಹಾಜರುಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.
ಇಲ್ಲಿನ ಬಟ್ಟೆ ಅಂಗಡಿಯ ಉದ್ಯೋಗಿಯಾಗಿದ್ದ ಹೊಸಬೆಟ್ಟು ಕಡಂಬರಗುತ್ತು ಸುದರ್ಶನ್ ಜೈನ್(28)ಎಂಬವರನ್ನು ಕಳೆದ ಆಗಸ್ಟ್ 11ರಂದು ರಾತ್ರಿ ಆತನ ತಮ್ಮ ಸುಧೀರ್ ಜೈನ್ ಜತೆ ಬೈಕಿನಲ್ಲಿ ಮನೆಗೆಂದು ಕರೆದುಕೊಂಡು ಬಂದಿದ್ದ. ಮನೆ ಹತ್ತಿರ ತಲುಪುವಾಗ ಬೈಕ್ ಕೆಟ್ಟು ಹೋಗಿದೆ ಎಂದು ಸುಳ್ಳು ಹೇಳಿ ಅಣ್ಣನನ್ನು ಬೈಕ್‍ನಿಂದ ಇಳಿಸಿ ಹತ್ತಿರದಲ್ಲಿ ನಿಂತಿದ್ದ ಕಾರಿನೊಳಗೆ ಕರೆದುಕೊಂಡು ಹೋಗಿದ್ದ. ಅದರಲ್ಲಿದ್ದ ಸುಧೀರ್‍ನ ಸ್ನೇಹಿತರು ಕಾರನ್ನು ಬೇರೆಡೆಗೆ ಕೊಂಡೊಯ್ದು ಸುದರ್ಶನ್‍ಗೆ ಮಾರಕಾಯುಧದಿಂದ ಇರಿದು ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಬಳಿಕ ಶವವನ್ನು ಪುಚ್ಚೆಮೊಗರಿನ ಪಲ್ಗುಣಿಗೆ ನದಿಗೆ ಎಸೆದಿದ್ದರು. ಆಗಸ್ಟ್ 17ಕ್ಕೆ ಶವ ಮರವೂರು ಡ್ಯಾಂನಲ್ಲಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೃತನ ತಮ್ಮ ಸುಧೀರ್ ಜೈನ್(24) ಆತನ ಸ್ನೇಹಿತರಾದ ಹೊಕ್ಕಾಡಿಗೋಳಿಯ ಸಂದೀಪ್ ಶೆಟ್ಟಿ(29)ವೇಣೂರು ಆರಂಬೋಡಿಯ ಬಾಲರಾಜ್(23), ವಾಹನ ಚಾಲಕ ಆರಂಬೋಡಿಯ ಪ್ರಭಾ ಯಾನೆ ಪ್ರಭಾಕರನನ್ನು ಈ ಹಿಂದೆ0iÉು ಬಂಧಿಸಿದ್ದರು. ಮೂಡುಬಿದಿರೆ ಪೆÇಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *