ರಾಯಚೂರು: ಅತ್ಯಾಚರ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ, ಆದರೆ ಅತ್ಯಾಚಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಅತ್ಯಾಚಾರದಿಂದ ನೊಂದವರ ಹೆತ್ತವರು ಅತ್ಯಾಚಾರಿಗಳ ಕೈ ಕತ್ತರಿಸಬೇಕು ಎಂಬ ಹೇಳಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುತಾಲಿಕ್ ಈ ವಿಷಯ ತಿಳಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಗರಂ ಹೇಳಿಕೆ ನೀಡಿದ ಮುತಾಲಿಕ್ ಗಡಿಯಲ್ಲಿ ಪಾಕ್ ಪುಂಡರು ಗುಂಡಿನ ದಾಳಿ ನಡೆಸಿ ಕದನವಿರಾಮ ಉಲ್ಲಂಘಿಸುತ್ತಿದ್ದಾರೆ. ಆದರೆ ಭಾರತ ತಕ್ಕ ಉತ್ತರ ನೀಡುತ್ತಿಲ್ಲ. ಪಾಕ್ ಸದ್ದಡಗಿಸಬೇಕಾದರೆ ಕದನವಿರಾಮ ಉಲ್ಲಂಘಿಸಿ ಭಾರತ ಪ್ರತಿದಾಳಿ ನಡೆಸಬೇಕು ಎಂದು ಕರೆ ನಿಡಿದ್ದಾರೆ.

