ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಇದರ ವತಿಯಿಂದ ಸೋಮವಾರ ಮೊಸರುಕುಡಿಕೆ ಉತ್ಸವ ನಡೆಯಿತು. ರಾಮಕೃಷ್ಣತಪೋವನದ ಸ್ವಾಮೀ ವಿವೇಕಚೈತನ್ಯಾನಂದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದ ವಠಾರದಲ್ಲಿ ಆಟೋಟ ಸ್ಪ ರ್ಧೆಗಳು ಏರ್ಪಡಿಸಿ. ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟ ಹಾಗೂ ಬಾಲಕ ಬಾಲಕಿಯರ, ಯುವಕರ ಯುವತಿಯರ ವಿಭಾಗದ ಸ್ಫರ್ಧೆಗಳು ಓಟ,ಸಂಗೀತ ಕುರ್ಚಿ, ಗುಂಡೆಸೆತ,ಸಂಗೀತ ಸ್ಫರ್ಧೆ, ಮಡಕೆ ಒಡೆಯುವುದು,ಛದ್ಮವೇಷ ಸ್ಪರ್ಧೆ, ,ತ್ರೋಬಾಲ್,ಹಗ್ಗಜಗ್ಗಾಟ,ಲಿಂಬೆಹಣ್ಣು ಸ್ಪರ್ಧೆ,ಭಾರ ಎತ್ತುವುದು,ವಾಲಿಬಾಲ್ ಪಂದ್ಯಾಟಗಳು ನಡೆಯಿತು. ಆದಿ ಶಕ್ತಿಸೇವಾಸಮಿತಿ ಹಾಗೂ ಮಹಿಳಾ ಮಂಡಳಿ, ಜೈ ವೀರಮಾರೂತಿ ವ್ಯಾಯಮ ಶಾಲೆ ಬಡಗಬೆಳ್ಳೂರು ಸಹಕರಿಸಿದೆರು.
ಶ್ರೀ ಕೃಷ್ಣನ ವೇಷವನ್ನು ಹಾಕಿ ಗಮನ ಸೆಳೆದ ಪುಟಾಣಿಗಳಾದ ವೃಶಾಲಿ ಹಾಗೂ ಪ್ರಣಾಮ್ ಇವರನ್ನು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಎತ್ತಿ ಹಿಡಿದು ಸಂತಸಪಟ್ಟರು.ನಂತರ ಅವರು ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು.

