ಮೂಡುಬಿದಿರೆ: ಕೊಡಗಿನಲ್ಲಿ ನಡೆದ ಪ್ರವಾಹದಿಂದ ತತ್ತರಿಸಿದ, ಸಂತ್ರಸ್ತರಾಗಿರುವ ಜನತೆಗೆ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಮೂಡಬಿದಿರೆ ಹಾಗೂ ಪರಿಸರದ ಗ್ರಾಮಗಳ ಉದಾರಿಗಳಿಂದ ಸಂಗ್ರಹಿಸಲಾದ 54 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ಸಾಯಂಕಾಲ ತಹಸೀಲ್ದಾರ್ ರಶ್ಮಿ ಅವರಿಗೆ ಹಸ್ತಾಂತರಿಸುವ ಸರಳ ಕಾರ್ಯಕ್ರಮ ಮೂಡಬಿದಿರೆ ಜೆಡಿಎಸ್ ಕಚೇರಿ ಎದುರು ಜರಗಿತು.
ತೋಡಾರು ದಿವಾಕರ ಶೆಟ್ಟಿ, ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಶೆಟ್ಟಿ ಪಾಲಡ್ಕ, ಪೃಥ್ವೀರಾಜ್ ಶೆಟ್ಟಿ, ಸುಕುಮಾರ ದೇವಾಡಿಗ, ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಶೆಟ್ಟಿ ಮಿಜಾರುಗುತ್ತು, ವಿಶ್ವಾಸ್ ಅಲಂಗಾರು, ಭಾಸ್ಕರ ಆಚಾರ್ಯ, ಅಜಿತ್ ಕುಮಾರ್ ಕಿಶೋರ್ ಶೆಟ್ಟಿ , ಭಾನುಪ್ರಕಾಶ್ ರಾವ್ ಮುಂತಾದವರು ಭಾಗಿಯಾದರು.


