ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯಕ್ಕೆ ಸಾರಿಗೆ ಸಚಿವ ತಮ್ಮಯ್ಯ ಕುಟುಂಬ ಸಮೇತರಾಗಿ ಬೇಟಿ ನೀಡಿದರು . ಜಿರ್ಣೋದ್ಧಾರಗೊಳ್ಳುತ್ತೀರುವ ದೇವಾಲಯದ ಕೆಲಸ ಕಾರ್ಯವನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ದೇವಳದ ಜಿರ್ಣೋದ್ಧಾರ ಕಾರ್ಯಗಳ ಬಗ್ಗೆ ಮೊಕ್ತೇಸರ ಯು.ಟಿ. ಆಳ್ವ ಅವರು ಸಚಿವರಿಗೆ ವಿವರಿಸಿದರು.
ಇವರೊಂದಿಗೆ ಜೆ.ಡಿ.ಎಸ್.ಯೂತ್ ಜಿಲ್ಲಾ ಅಧ್ಯಕ್ಷ ಅಶಿತ್ ಸುವರ್ಣ, ಮೂರ್ತಿ ಡಿ.ಸಿ,ಟಿ.ಎಂ.ಎಲ್.ಎ ಮತ್ತಿತ್ತರರು ಉಪಸ್ಥಿತರಿದ್ದರು. ದೇವಳದ ವತಿಯಿಂದ ಮಾಧವ ಭಟ್ ಪ್ರಸಾದ ನೀಡಿದರು. ದೇವಳದ ಆಡಳಿತ ಮೋಕ್ತೆಸರ ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಯು.ತಾರನಾಥ ಆಳ್ವ, ದೇವಳದ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಕೃಷ್ಣರಾಜ್ ಮಾರ್ಲ , ಸುಬ್ರಾಯ ಕಾರಂತ ಮತ್ತಿತ್ತರರು ಉಪಸ್ಥಿತರಿದ್ದರು.
