ಮೂಡುಬಿದಿರೆ : ಶಿರ್ತಾಡಿ ಗ್ರಾ.ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಶಿರ್ತಾಡಿ, ಮೂಡುಕೊಣಾಜೆ ಹಾಗೂ ಪಡುಕೊಣಾಜೆ ಗ್ರಾಮಗಳಿಗೆ ಸಂಬಂಧಿಸಿದ 94ಸಿ ಮತ್ತು 94ಸಿಸಿ ಅರ್ಜಿಗಳ ಶೀಘ್ರ ವೀಲೇವಾರಿಗಾಗಿ ಕಂದಾಯ ಅದಾಲತ್ ಪಂಚಾಯತ್ ಸಭಾಂಗಣದಲ್ಲಿ ಆ.8ಬುಧವಾರದಂದು ನಡೆಯಿತು.

ಮೂಡುಬಿದಿರೆ ತಹಶೀಲ್ದಾರ್ ರಶ್ಮಿ, ಗ್ರಾ.ಪಂ ಅಧ್ಯಕ್ಷೆ ಲತಾ ಹೆಗ್ಡೆ, ಉಪಾಧ್ಯಕ್ಷ ರಾಜೇಶ್ ಸುವರ್ಣ, ಸದಸ್ಯರಾದ ಸುಕೇಶ್ ಶೆಟ್ಟಿ, ಆನಂದ, ಸಂತೋಷ್, ಕಂದಾಯ ನಿರೀಕ್ಷಕ ಹ್ಯಾರೀಸ್, ಪ್ರವೀಣ್ ಕುಮಾರ್ ಜೈನ್, ಯಶೋಧರ, ತುಳಸಿ, ಪಂಚಾಯತ್ ಸದಸ್ಯರಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೋನು, ಕಾರ್ಯದರ್ಶಿ ರವಿ, ಗ್ರಾಮಕರಣಿಕೆ ಉಷಾ ಮತ್ತಿತರರು ಉಪಸ್ಥಿತರಿದ್ದರು.
