ಬಂಟ್ವಾಳ: ಗ್ರಾಮ ಸಹಾಯಕ ಸಂಘ ಬಂಟ್ವಾಳ ಇವರ ವತಿಯಿಂದ ಗ್ರಾಮ ಸಹಾಯಕರ ಖಾಯಂ ಹುದ್ದೆ ಮಾಡುವಂತೆ ಸರಕಾರದ ಗಮನಕ್ಕೆ ತರಬೇಕು ಎಂದು ಶಾಸಕ ರಾಜೇಶ್ ನಾಯಕ್ ಅವರಿಗೆ ಶಾಸಕರ ಕಚೇರಿಯಲ್ಲಿ ಮನವಿ ನೀಡಲಾಯಿತು.

ಸುಮಾರು ಮೂವತ್ತು ವರ್ಷಗಳಿಂದ ಗ್ರಾಮ ಸಹಾಯಕರಾಗಿ ಕೆಲಸ ನಿರ್ಹಿಸುತ್ತಿದ್ದರೂ ಸರಕಾರ ಈ ಬಗ್ಗೆ ಯಾವುದೇ ಗಮನ ನೀಡಿಲ್ಲ ಎಂದು ಶಾಸಕರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

ಇದೆ ವೇಳೆಯಲ್ಲಿ ನೂತನ ಶಾಸಕರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕ್ರಷ್ಣಪ್ಪ, ಅದ್ಯಕ್ಷ ಮೋಹನ್ ದಾಸ , ತಾಲೂಕು ಕಾರ್ಯದರ್ಶಿ ಸುಂದರ ಬಿ.ಕೆ, ಹಾಗೂ ಸಂಘದ ಸದಸ್ಯರು ಗಳು ಉಪಸ್ಥಿತರಿದ್ದರು.
