ಮೂಡುಬಿದಿರೆ : ನಮ್ಮ ವ್ಯಾಪ್ತಿಯಲ್ಲಿ ನಡೆಯುವಂತಹ ಯಾವುದೇ ಪ್ರಕರಣಗಳ ಬಗ್ಗೆ ಸೂಕ್ತ ಮಾಹಿತಿ ತಿಳಿಯಲು ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ನ ಬಗ್ಗೆ ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದಲ್ಲಿ ಆ.2 ಗುರುವಾರದಂದು ಮಾಹಿತಿ ನೀಡಿದರು.
ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕರಾದ ದೇಜಪ್ಪ ಮತ್ತು ಕೃಷ್ಣ ಬಿ. ಅವರು ಮೂಡುಬಿದಿರೆ ಖಾಸಗಿ ಬಸ್ಸು ನಿಲ್ದಾಣ, ಆಟೋ ಚಾಲಕರು, ಕಲ್ಲಬೆಟ್ಟಿನ ಎಕ್ಸಲೆಂಟ್ ಕಾಲೇಜು ಮತ್ತು ದವಳಾ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಸಿಬಂದಿ ಪುರಂದರ ಅವರು ಉಪಸ್ಥಿತರಿದ್ದರು.

