ಗುರುಪುರ: ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿಯವರ 19ನೇ ಯತಿಚಾತುರ್ಮಾಸ್ಯ ವೃತಾಚರಣೆಯು ಆಗಸ್ಟ್ 2ರಿಂದ ಸಪ್ಟೆಂಬರ್ 5ರ ತನಕ ವಜ್ರದೇಹಿ ಮಠದಲ್ಲಿ ನಡೆಯಲಿದೆ.
ವರುಣ್ ಭಟ್ ಅವರ ನೇತೃತ್ವದಲ್ಲಿ ಮೃತ್ತಿಕಾ ಪೂಜೆಯೊಂದಿಗೆ ಬ್ರಹ್ಮಶ್ರೀ ಖಂಡಿಗೆ ಜರುಗಲಿರುವುದು. ಈ ವೇಳೆ ಧಾರ್ಮಿಕ ಸತ್ಸಂಗದಲ್ಲಿ ಭಕ್ತಾದಿಗಳು ಆಗಮಿಸಬಹುದು. ಈ ದಿನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ವಜ್ರದೇಹಿ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

