ಬೆಂಗಳೂರು: ಕೈಕಂಬ: ತುಮಕೂರಿನಿಂದ ಬೆಂಗಳೂರಿನಗೆ ಸಾಗುತ್ತಿದ್ದ ಕಾರೊಂದು ಕಳೆದ ರಾತ್ರಿ ನೆಲಮಂಗಲ ಸಮೀಪ ತಾವರೆ ಕೆರೆ ಎಂಬಲ್ಲಿ ಕೆಎಸ್ಆರ್ ಟಿಸಿ ಬಸ್ಸು ಮತ್ತು ಕಾರು ನಡುವೆ ಭೀಕರ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಕಾರಿನಲ್ಲಿ ಐವರು ಬೆಂಗಳೂರಿನಿಂದ ತುಮಕೂರಿಗೆ ಆಗಮಿಸಿ ಹಿಂದುರಿಗಿ ಹೋಗುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಮೃತರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ತಾನದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಅವರ ಪುತ್ರ ಶ್ರೀನಿಧಿ (21 ) ಮತ್ತೊಬ್ಬ ಗುರುಪುರ ಕೈಕಂಬದ ಉಧ್ಯಮಿ ಶ್ರೀ ರಾಮ್ ಹೋಟೇಲ್ ಮಾಲಕ ಹರೀ ರಾವ್ ಅವರ ಮಗಳ ಮಗ ( ಮೊಮ್ಮಗ ) ತುಮಕೂರಿನ ಗುರುಪ್ರಸಾದ್ ಬಲ್ಲಪುರಾಯ ಹಾಗೂ ವಿದ್ಯಾಲಕ್ಷ್ಮೀ ಅವರ ಪುತ್ರ ಪ್ರಜ್ವಲ್( 22 )ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ನಾಲ್ಕೈದು ಗೆಳೆಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಉಳಿದವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಜಾರಿನಲ್ಲಿರುವ ಯೇನಪೋಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ವ್ಯಾಸಂಗ ಮಾಡುತ್ತಿರುವ ಶರತ್, ಇಂಟರರ್ನ್ಶಿಪ್ಪಿಗೆಂದು ಬೆಂಗಳೂರಿಗೆ ಹೋಗುವುದಕ್ಕಿಂತ ಮುಂಚೆ ತುಮಕೂರಿಗೆ ತೆರಳಿದ್ದ. ಅಲ್ಲಿಂದ ಇವರು ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಶರತ್ ಕಾರು ಚಲಾಯಿಸುತ್ತಿದ್ದ.
“ಪ್ರಜ್ವಲ್ ಮತ್ತು ಶರತ್ ತನ್ನ ಸಹೋದರಿಯರಿಬ್ಬರ ಪುತ್ರರು. , ಶರತನು ಭಾಸ್ಕರ್ ಉಪಾಧ್ಯಾಯ(ಕಟೀಲು) ಮತ್ತು ಪ್ರೇಮಲತಾರ ಪುತ್ರನಾಗಿದ್ದಾನೆ”ಶರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪ್ರಜ್ವಲ್ ಅವರ ಮಾವ ಮಾಹಿತಿ ನೀಡಿದ್ದಾರೆ.






