ಬಂಟ್ವಾಳ: ಬಿಸಿರೋಡು ಖಾಸಗಿ ಬಸ್ ನಿಲ್ದಾಣ ದ ಹಿಂಬದಿಯಲ್ಲಿ ಕೆನರಾ ಬಿಲ್ಡಿಂಗ್ ನಲ್ಲಿ ನೂತನ ವಾಗಿ ಶುಭಾರಂಭ ಗೊಂಡ ಹೋಟೆಲ್ ಮತ್ಸ್ಯ ಸಾಗರ ದ ಉದ್ಘಾಟನೆ ಯನ್ನು ಕಟ್ಟಡದ ಮಾಲಕರಾದ ಮಾದವ. ಬಿ. ದೀಪ ಬೆಳಗಿಸಿ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಬೂಡಾ ಅಧ್ಯಕ್ಷ ರಾದ ಸದಾಶಿವ ಬಂಗೇರ, ನೋಟರಿ ವಕೀಲ ಚಿದಾನಂದ ಕಡೇ ಶಿವಾಲಯ, ಕಲಾವಿದ ಎಚ್.ಕೆ.ನಯನಾಡ್, ಕುಲಾಲ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕುಲಾಲ್, ಹೋಟೆಲ್ ಮಾಲಕರಾದ ನಾರಾಯಣ ಸಿ.ಪೆರ್ನೆ, ಜಯಲಕ್ಮೀ ಎಸ್ ಬಂಗೇರ, ಸವಿತಾ ಎನ್.ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.


