ಕೈಕಂಬ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ರವಿವಾರ ಇಲ್ಲಿನ ಸಮೀಪದ ಕುಪ್ಪೆಪದವುನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಡಿ.ಪಿ. ಹಮ್ಮಬ್ಬ, ಕಾರ್ಯಕರ್ತರಾದ ಜಗನ್ನಾಥ ರೈ.ಎಂ., ಟಿಪ್ಪು ಹುಸೈನ್, ರಮೀಝ್, ಅಝಿಲ್, ಶೇಖರ್, ಜೋಸೆಫ್ ರೊಸಾರಿಯೋ, ಸುಲೈಮಾನ್, ಶರೀಫ್, ಹನೀಫ್, ಅಬ್ದುಲ್ ಸಲಾಮ್, ಗಂಗಾಧರ ಮತ್ತಿತರರಿದ್ದರು.

