ಕೈಕಂಬ: ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆಯ ಚಾವಡಿಯ ಧೂಮಾವತಿ ,ಬಂಟ ಸಹಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಗೃಹಪ್ರವೇಶ ಮತ್ತು ಧರ್ಮನೇಮೋತ್ಸವದ ಚಪ್ಪರ ಮೂಹೂರ್ತವು ಸೋಮವಾರ ಬೆಳಗ್ಗೆ ಪೊಳಲಿ ಕೋಡಿಮಜಲು ವೇದಮೂರ್ತಿಶ್ರೀ ಅನಂತಪದ್ಮನಾಭ ಉಪಾಧ್ಯಾಯ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಪ್ಪುಗುಡ್ಡೆಗುತ್ತು ಬುಜಂಗ ಶೆಟ್ಟಿ,ಅಧ್ಯಪಾಡಿಗುತ್ತು ರಾಜೀವ ಆಳ್ವ,ಬೈಲ್ ಮೂಡುಕರೆ ದೇವದಾಸ್ ನಾೈಕ್, ಬೈಲುಏತಮೊಗರುಗುತ್ತು ಸದಾಶಿವ ಯಾನೆ ಜಯ ಶೆಟ್ಟಿ ಗಡಿಕಾರರು, ಶೆಡ್ಡೆ ಮಂಜುನಾಥ ಭಂಡಾರಿ, ರಮಾನಾಥ ಅತ್ತರ್, ಪೆರ್ಮುದೆ ಮೇಗಿನ ಮನೆ ಮಂಜುಳಾ ಬಾಬು ಶೆಟ್ಟಿ, ಅಳಿಕೆ ಗುತ್ತು ಮೂಡುಪೆರಾರಮಣಿಲಾ ವಿಠಲ ಪೂಂಜ, ಬೈಲು ಮೂಡುಕರೆ ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
