ಉಳ್ಳಾಲ:ಹಯತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘ ದೇರಳಕಟ್ಟೆ ವತಿಯಿಂದ ಪ್ರವಾದಿ ಜನ್ಮ ದಿನಾಚಾರಣೆ ಪ್ರಯುಕ್ತ ಕಣಚೂರು ಅಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.deralakatte ed anuhapalu vitarane 01

ದ.ಕ ವಕ್ಫ್ ಬೋರ್ಡ್ ಅಧ್ಯಕ್ಷ ಯು.ಕೆ ಕಣಚೂರು ಮೋನು ಮಾತನಾಡಿ, ತನ್ನ ಸಂತೋಷದ ದಿನಗಳಲ್ಲಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯವ ರೋಗಿಗಳಗೆ ಹಣ್ಣು ಹಂಪಲು ನೀಡಿವ ಮೂಲಕ ಪರಸ್ಪರ ಸಂತೋಷವನ್ನು ಹಂಚಿದಾಗ ಮಾತ್ರ ನಮ್ಮ ದೇಶ ಬದಲಾವಣೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.deralakatte ed anuhapalu vitarane 02

ಹಯತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಪ್ರ.ಕಾರ್ಯದರ್ಶಿ ಅಶ್ರಫ್ ಡಿ.ಎ ಮಾತನಾಡಿ ಹಯತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ ಬಂದ ನಂತರ ಸಮಾಜಮುಖಿ ಕಾರ್ಯಕ್ರಮ ಮಾಡುತ್ತ ಬಂದಿದೆ. ಇಂದು ಪ್ರವಾದಿಯ ಜನ್ಮ ದಿನದ ಅಂಗವಾಗಿ ಸುಮಾರು 150 ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದೆವೆ ಎಂದು ಹೇಳಿದರು.deralakatte ed anuhapalu vitarane 03

deralakatte ed anuhapalu vitarane 04ದ.ಕ ವಕ್ಫ್ ಬೋರ್ಡ್ ಅಧ್ಯಕ್ಷ ಯು.ಕೆ ಕಣಚೂರು ಮೋನು, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮೊಹಮ್ಮದ್, ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್.ಡಿ, ಸಮಾಜ ಸೇವಕರಾದ ಎಷ್ಯನ್ ಬಾವ ಹಾಜಿ, ಶರೀಫ್ ಕೆ.ಎಂ, ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಗೌರವಾಧ್ಯಕ್ಷ ಡಿ. ಇದಿನಬ್ಬ ಹಾಜಿ, ಅಧ್ಯಕ್ಷ ಅಬ್ಬಾಸ್ ಡಿ, ಉಪಾಧ್ಯಕ್ಷ ಅಬ್ದುಲ್ ಅಝೀಝ್, ಪ್ರ.ಕಾರ್ಯದರ್ಶಿ ಅಬ್ದುಲ್ಲ ಆರ್ ರಹ್ಮಾನ್, ಜೊತೆ ಕಾರ್ಯದರ್ಶಿಗಳಾದ ಮುಹಮ್ಮದಾಲಿ, ಹಯತುಲ್ ಇಸ್ಲಾಂ ಮದರಸ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ಕೆ.ಎಂ, ಉಪಾಧ್ಯಕ್ಷ ರಿಯಾಝ್ ಡಿ.ಎಂ, ಪ್ರ.ಕಾರ್ಯದರ್ಶಿ ಅಶ್ರಫ್ ಡಿ.ಎ ಜೊತೆ ಕಾರ್ಯದರ್ಶಿಗಳಾದ ಶಿಹಾಬುದ್ದೀನ್. ಡಿ, ಖಲಂದರ್ ಶಾಫಿ, ಕೋಶಾಧಿಕಾರಿ ಯಾಸೀರ್.ಡಿ, ಮಾಜಿ ಅಧ್ಯಕ್ಷ ನಾಸೀರ್ ಅಹ್ಮದ್, ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *