ಮಂಗಳೂರು, : ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ’ ಸಂಘಟನೆಯ ವತಿಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟವು ಮೇಲ್ತೆನೆಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಅವರ ಮನೆಯಲ್ಲಿ ರವಿವಾರ ನಡೆಯಿತು.
`ಮೇಲ್ತೆನೆ’ಯ ಅಧ್ಯಕ್ಷ ಆಲಿಕುಂಞÂ ಪಾರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಕಲ್ಕಟ್ಟ ಮಂಡಿಸಿದ “ಬ್ಯಾರಿ ಭಾಷೆಯ ಹಿನ್ನಡೆಗೆ ಬ್ಯಾರಿಗಳೇ ಕಾರಣರು” ಎಂಬ ವಿಷಯದ ಮೇಲೆ ವಿಸ್ತøತ ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಟಿ. ಇಸ್ಮಾಯೀಲ್, ಸದಸ್ಯರಾದ ಹಂಝ ಮಲಾರ್, ಬಶೀರ್ ಅಹ್ಮದ್ ಕಿನ್ಯ, ನಿಯಾಝ್ ಪಿ., ಆರೀಫ್ ಕಲ್ಕಟ್ಟ ರಫೀಕ್ ಪಾಣೇಲ ಉಪಸ್ಥಿತರಿದ್ದರು.
….
