ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿತ್ವದ ಆರ್ಥಿಕ ಮಹಾಕ್ರಾಂತಿಗೆ ನ.೮ ಕ್ಕೆ ಒಂದು ವರ್ಷ . ನಿರಂತರವಾಗಿ ಮತ್ತು ಅವ್ಯಾಹತವಾಗಿ ಚಲಾವಣೆಯಾಗುತ್ತಿದ್ದ ಕಳ್ಳ ನೋಟು ಜಾಲವನ್ನು ತಡೆಯಲು ಹಾಗೂ ಕಪ್ಪು ಹಣಕ್ಕೆ ಒಂದು ಬ್ರೇಕ್ ಹಾಕಲು ಪ್ರಧಾನಿಯವರು ಈ ರೀತಿಯ ಹೋಸ ರೀತಿಯ ಚಿಂತನೆ ನಡೆಸಿದ್ದರು.
ಈ ರೀತಿಯ ಮಹತ್ತರವಾದ ಬದಲಾವಣೆಗಳನ್ನು ತರುವ ಸಂದರ್ಭದಲ್ಲಿ ತನ್ನ ಮಂತ್ರಿ ಮಂಡಲದ ಒಂದಿಬ್ಬರಿಗೆ ವಿಷಯ ತಿಳಿಸಿದ್ದು ಬಿಟ್ಟರೆ ಅತ್ಯಂತ ಗೌಪ್ಯವಾಗಿ ಕ್ರಮ ಕೈಗೊಂಡಿದ್ದರು. ಅತ್ಯಂತ ದೊಡ್ಡ ಮುಖ ಬೆಲೆಯ ೨೦೦೦ ರೂ ನೋಟನ್ನು ಬಿಡುಗಡೆ ಮಾಡಿದ ದೇಶದ ಪ್ರಥಮ ಪ್ರಧಾನಿ. ಇದೊಂದು ಉತ್ತಮ ಸಂಗತಿ ಎಂದು ದೇಶದ ಎಲ್ಲಾ ಜನರಿಗೆ ಗೊತ್ತಿದ್ದರೂ ಕೂಡಾ ವಿರೋಧ ಪಕ್ಷಗಳು ಇದನ್ನು ರಾಜಕೀಯ ವಾಗಿ ವಿರೋದಿಸಿತ್ತಾ ಅಸ್ತ್ರವಾಗಿ ಬಳಸುತ್ತಾರೆ. ಒಟ್ಟಾರೆಯಾಗಿ ಸಾಕಷ್ಟು ಸಂಕಷ್ಟ ಮತ್ತು ಸಮಸ್ಯೆಗಳ ಮಧ್ಯೆ ಜನ ಸಾಮಾನ್ಯ ರು ಸ್ವೀಕರಿಸಿದ್ದು ಹೆಗ್ಗಳಿಕೆ ಮತ್ತು ಮಹಾಸಂಗತಿ ಎನ್ನಬಹುದು.
