ಕೈಕಂಬ:ಶ್ರೀ ಸದಾಶಿವ ದೇವಾಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ಕ್ಷಾಳನಾದಿ ಬಿಂಬಶುದ್ಧಿ . ಅವಗಾಹಹೋಮ, ಪ್ರೋಕ್ತಪ್ರಾಯಶ್ಚಿತ ಹೋಮ, ಶಕ್ತಿ ಹೋಮ ಮುಂತಾದ ಪೂಜೆ ವಿಧಿ ವಿಧಾನಗಳು ಜರಗಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಪೆರ್ಮಂಕಿ ಊರಿನ ಯುವ ಪ್ರತಿಭೆಗಳಿಂದ ಸಾಯಂಕಾಲ 6 ರಿಂದ ವಿವಿಧ ಸಾಂಸ್ಕೃತಿ ಕ ಕಾರ್ಯಕ್ರ ಮಗಳು ಜರಗಲಿದೆ. ರಾತ್ರಿ 8 ರಿಂದ ಶ್ರೀ ಮಹಮ್ಮಾಯಿ ರಂಗ ಕಲಾವಿದರು, ಉಳಾಯಿ ಬೆಟ್ಟು ಇವರಿಂದ ವಿನೂತನ ಶೈಲಿಯ ತುಳು ಹಾಸ್ಯಮಯ ನಾಟಕ ನಂಬುವರಾ…? ಬುಡ್ಪರಾ….? ನಾಟಕ ಜರಗಲಿದೆ.



