ತುಳುನಾಡಿನ ಜನರ ತಾಳ್ಮೆ ಎಂಬುದು ಹೇಡಿತನ ಅಥವಾ ಕೈಲಾಗದ ಅಸಹಾಯಕತೆ ಎಂದು ತಪ್ಪು ಲೆಕ್ಕಾಚಾರ ಮಾಡುವ ಜನ ಪ್ರತಿನಿಧಿ ಗಳು ಸರಕಾರಗಳು ಹಾಗು ನ್ಯಾಯ ಪೀಠಗಳೂ ಕಣ್ಣು ತೆರೆದು ಕಂಬಳ ಹಾಗು ನೇತ್ರಾವತಿ ನದಿ ತಿರುವಿನತ್ತ ನೋಡಬೇಕು .ನಮ್ಮ ಧ್ವನಿಯಲ್ಲಿ ಇರುವ ನೈಜ ಕಳ ಕಳಿ ,ಪರಿಸರ ಮುಖೀ ಹಾಗು ತುಳುನಾಡಿನ ಆಚಾರ ವಿಚಾರ ಸಂಸ್ಕಾರ ಮುಖಿ ಚಿಂತನೆ ಗಳನ್ನ ಗಮನಿಸಬೇಕು .ತಪ್ಪು ಹೆಜ್ಜೆಗಳನಿಟ್ಟು ತಾಳ್ಮೆಯ ತುಳುನಾಡ ಕರಾವಳಿ ಜನರನ್ನ ಗಂಭೀರ ಹೋರಾಟದತ್ತ ಎಳೆದು ತರಬೇಡಿ.
ತಾಳ್ಮೆ ದೌರ್ಬಲ್ಯ ಖಂಡಿತಾ ಅಲ್ಲ .
ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು
ಅಧ್ಯಕ್ಷರು ಕನ್ನಡ ಕಟ್ಟೆ ಮಂಗಳೂರು

