ಬಂಟ್ವಾಳ: ದ.ಕ ಜಿಲ್ಲೆಯ ಜೀವನದಿ ಎತ್ತಿನಹೊಳೆ ಯೋಜನೆ ವಿರುದ್ಧಈ ಹೋರಾಟದ ಪ್ರಯುಕ್ತ ದಿನಾಂಕ: 11ರಂದು ಬಂಟ್ವಾಳ ತಾಲೂಕಿಗೆ ಆಗಮಿಸುವ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಬೆಂಬಲ ವ್ಯಕ್ತಪಡಿಸುತ್ತಿದೆ.
ಈ ಯೋಜನೆಅನುಷ್ಥಾನಗೊಂಡರೆಜಿಲ್ಲೆಯಲ್ಲಿ ಜಲ ಮತ್ತು ಪುಣ್ಯ ನೆಲಗಳು ಭತ್ತಿ ಬರಡಾಗಬಹುದು. ಜಿಲ್ಲೆಯ ಜನರ ಜೀವನ, ಪಶು ಪಕ್ಷಿಗಳಿಗೆ ಬದುಕಲು ತೊಂದರೆಯಾಗಬಹುದು. ಮತ್ತು ಅವಿಜ್ಞಾನಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸುವುದರ ವಿರುದ್ಧ ಈ ಹಿಂದೆಕೂಡಾ ಹೋರಾಟಕ್ಕೆ ಹಿಂದುಜಾಗರಣ ವೇದಿಕೆ ಬೆಂಬಲ ವ್ಯಕ್ತಪಡಿಸಿದ್ದು, ಇದೀಗ ನಡೆಯುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಗೆ ಬಂಟ್ವಾಳ ತಾಲೂಕಿನಾದ್ಯಂತ ಹಿಂದುಜಾಗರಣ ವೇದಿಕೆ ಬೆಂಬಲ ವ್ಯಕ್ತಪಡಿಸುತ್ತಿದೆಎಂದು ಹಿಂ.ಜಾ.ವೇ. ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ ಹಾಗೂ ಸಂಚಾಲಕ ಪ್ರಶಾಂತ್ ಕೆಂಪುಗುಡ್ಡೆ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

