ಬದಿಯಡ್ಕ : ಸಹಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಬದಿಯಡ್ಕ ಇದರ ವತಿಯಿಂದ ಮಾಜಿ ರಾಷ್ಟ್ರಪತಿಯಾದ ಡಾ| ಎ.ಪಿ. ಜೆ ಅಬ್ದುಲ್ ಕಲಾಂ ಜನ್ಮ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಮರ್ಸ್ ವಿಭಾಹದ ವಿದ್ಯಾರ್ಥಿಗಳು ಆಯೋಜಿಸಿದ ಒಂದು ದಿನದ ಎನಿಗ್ಮಾ ಪೆಸ್ಟ್ -2016ನ್ನು ಅಡೂರು ಸರಕಾರಿ ಹೈಯರ್ ಸೆಕೆಂಡು ವಿಭಾಗದ ಕಾಮರ್ಸ್ ಅಧ್ಯಾಪಕರಾದ ಶ್ರೀ ಪ್ರವೀಣ್ ಕುಮಾರ್ ಕಾರಡ್ಕು ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಕಾಲೇಜು ಪ್ರಾಂಶುಪಾಲರಾದ ಶ್ರೀ ಶಿವದಾಸ್ ಸಿ.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಹ-ಪ್ರಾಧ್ಯಾಪಕರಾದ ಶ್ರೀ ಚಂದ್ರಶೇಖರ್ ಏತಡ್ಕ ಮತ್ತು ಸ್ಟಾಪ್ ಸೆಕ್ರೆಟರಿ ಕುಮಾರಿ ಸುಪ್ರಿಯ ಏತಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅನಂತರ ಕಾಮರ್ಸ್ ವಿಭಾಗದ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸೌಮ್ಯ ಸ್ವಾಗತಿಸಿ ವಿಜೇಶ್ ವಂದಿಸಿದರು. ರವೀಶ್ ಯಾದವ್ ಮಾನ್ಯ ಕಾರ್ಯಕ್ರಮ ನಿರೂಪಿಸಿದರು.

