ಮೂಡುಬಿದಿರೆ: ಡಿಸೆಂಬರ್ನಲ್ಲಿ ಬದಿಯಡ್ಕದಲ್ಲಿ ನಡೆಯಲಿರುವ “ವಿಶ್ವ ತುಳುವೆರೆ ಆಯನೋ-2ಂ16″ಕ್ಕೆ ಭಾಗವಹಿಸಲು ಬಾರ್ಕೂರಿನ ತುಳುವೇಶ್ವರ ದೇವಾಸ್ಥಾನದಿಂದ ಹೊರಟಿರುವ ತುಳು ತೇರು ಭಾನುವಾರ ಮೂಡುಬಿದಿರೆಗೆ ಆಗಮಿಸಿದ್ದು, ಇದನ್ನು ಪೊಣ್ಣೆಚ್ಚಾರಿ ಲಕ್ಷ್ಮೀ ವೆಂಕಟರಮಣ ದೇವಾಸ್ಥಾನದ ಬಳಿ ಬರಮಾಡಿಕೊಳ್ಳಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕಾಮತ್, ಮೂಡುಬಿದಿರೆ ತುಳುಕೂಟದ ಕಾರ್ಯಾಧ್ಯಕ್ಷ ಚಂದ್ರಹಾಸ ದೇವಾಡಿಗ, ಉಪಾಧ್ಯಕ್ಷ ಧನಕೀರ್ತಿ ಬಲಿಪ, ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಡಾ.ರಾಜೇಶ್ ಆಳ್ವ ಹಾಗೂ ಪ್ರಭಾಕರ ಭಟ್ ಉಪಸ್ಥಿತರಿದ್ದರು.

