ಉಳ್ಳಾಲ: ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪೆರಿಯೋಡೊಂಟಿಕ್ಸ್ ವಿಭಾಗದಲ್ಲಿಬಾಯಿ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲರಾದಂತ ಡಾ! ಬಿ.ಎಚ್. ಶ್ರಿಪತಿ ರಾವ್ ಅವರು ಕಾರ್ಯಕ್ರಮವನ್ನು ಉದ್ವಾಟಿಸಿ ಬಾಯಿ ಯ ಆರೋಗ್ಯದ ಮಹತ್ವದ ಬಗ್ಗೆ ತಿಳಿಸಿದರು. ಹಾಗೂ ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಬೆಳ್ಳಿ ಹಬ್ಬದ ಆಚರಣೆಯ ಅಂಗವಾಗಿ ಒಂದು ವರುಷದ ತನಕ ಕಾಲೇಜಿನಲ್ಲಿ ನಡೆಯಲಿರುವ ವಿವಿದ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.

ಪೆರಿಯೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಹೆಗ್ಡೆಯವರು ಸ್ವಾಗತ ಭಾಷಣವನ್ನು ಮಾಡಿದರು ಹಾಗೂ ಡಾ. ರಾಜೇಶ್ ಕೆ.ಎಸ್. ವಂದನಾ ಸಮರ್ಪಣೆಯನ್ನು ಮಾಡಿದರು.

