ಮೂಡುಬಿದಿರೆ: ಇಲ್ಲಿನ ವಾಣಿಜ್ಯ ಮಳಿಗೆಯೊಂದರಲ್ಲಿ ಇಬ್ಬರು ಕಾರ್ಮಿಕ ಮಹಿಳೆಯರು ಹೊಡದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದ್ದು, ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಣಿಜ್ಯ ಮಳಿಗೆಯಲ್ಲಿ ದುಡಿಯುತ್ತಿದ್ದ ಪ್ರಸನ್ನಾ ಎಂಬಾಕೆಗೆ ಸಹೋದ್ಯೋಗಿ ವಿದ್ಯಾ ಎನ್ನುವವರು ಹಲ್ಲೆ ನಡೆಸಿದ್ದು, ಈ ಸಂದರ್ಭ ಮಾರಾಮಾರಿ ನಡೆದಿದ್ದು, ಇಬ್ಬರ ಜಗಳವನ್ನು ಅದೇ ಸಂಸ್ಥೆಯ ಮತ್ತೋರ್ವ ಕಾರ್ಮಿಕೆ ರುಕ್ಮಿಣಿ ಎನ್ನುವವರು ನಿಯಂತ್ರಿಸಿದ್ದಾರೆ.


ಘಟನೆ ಬಳಿಕ ಪ್ರಸನ್ನಾ ನೆರವಿಗೆ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಮಂದಿ ಧಾವಿಸಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ದೂರು ನೀಡಲಾಗಿದೆ. ಘಟನೆ ಬಳಿಕ ಪ್ರಸನ್ನಾ ನೆರವಿಗೆ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಮಂದಿ ಧಾವಿಸಿದ್ದು, ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ದೂರು ನೀಡಲಾಗಿದೆ. ಇಬ್ಬರ ಜಗಳಕ್ಕೂ ಕಾರಣವೊಂದನ್ನು ನೀಡಲಾಗಿದ್ದು, ಅಸಲಿಯತ್ತು ಪೋಲಿಸರಿಗಷ್ಟೇ ತಿಳಿಯ ಬೇಕಿದೆ.
