ಕೈಕಂಬ:ಕುಪ್ಪೆಪದವು ಗ್ರಾ.ಪಂ.ವ್ಯಾಪ್ತಿಯ ಕಲ್ಲಾಡಿ ಬಾರ್ದಿಲ ಕಂಬಳಕೋಡಿ ರಸ್ತೆಯನ್ನು ಬಿ.ಎ.ಮೊಯಿದಿನ್ ಬಾವ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 1.33ಕೋಟಿ ಕಾಮಗಾರಿ ಪೂರ್ಣಗೊಂಡು ರಸ್ತೆಯನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕುಪ್ಪೆಪದವು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಲೀಲಾವತಿ ವಹಿಸಿದ್ದರು. ಅತಿಥಿಗಳಾಗಿ ಕುಪ್ಪೆಪದವು ಗ್ರಾ.ಪಂ. ಸದಸ್ಯರಾದ ಅಬೂಬಕ್ಕರ್, ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆರ್ ಕೆ.ಪ್ರಥ್ವಿರಾಜ್, ಯುವ ಕಾಂಗ್ರೇಸ್ ಅಧ್ಯಕ್ಷರಾದ ಪುನೀತ್ ಕುಮಾರ್, ಮುಖಂಡರು ಕೃಷ್ಣ ಅಮೀನ್, ನಾಬರ್ಟ್ ಮಥಾಯಿಸ್, ಸುಚಾಶ್ಚಂದ್ರ ಭಂಡಾರಿ, ರಾಮಚಂದ್ರ, ಯುವ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಆಳ್ವ, ವಲಯ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ರಝಾಕ್,ನೀಲಯ್ಯ ಎಂ.ಅಗರಿ, ಹರೀಶ್ ಪೂಜಾರಿ, ಉಮರಬ್ಬ, ಅಬ್ದುಲ್ ಅಝೀಝ್ ಮತ್ತಿತ್ತರರು ಉಪಸ್ಥಿತರಿದ್ದರು. ಕುಪ್ಪೆಪದವು ಗ್ರಾ.ಪಂ.ಸದಸ್ಯರಾದ ಬಿ.ಎ.ಅಬೂಬಕ್ಕರ್ ಸ್ವಾಗತಿಸಿ, ವಂದಿಸಿದರು.



