ಭೋಪಾಲ: ಕಾಂಗ್ರೆಸ್ನ ಹಿರಿಯ ಹಿರಯ ನಾಯಕ ದಿಗ್ವಿಜಯ್ ಸಿಂಗ್, ಟಿ.ವಿ ನಿರೂಪಕಿ ಅಮೃತಾ ರೈ ಜೊತೆ ಪ್ರೇಮ ಸಂಬಂಧ ಹೊಂದಿರುವ ಸುದ್ದಿ ಜಗತ್ಜಾಹೀರಾಗಿದೆ. ದಿಗ್ವಿಜಯ್ ಸಿಂಗ್ ಸಹ ಅಮೃತಾರನ್ನ ವಿವಾಹವಾಗುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಆದರೆ, ದಿಗ್ವಿಜಯ್ ಅವರ ಈ
ಪ್ರೇಮ ಸಲ್ಲಾಪ ಅವರ ಗುರುಗಳಾದ ದ್ವಾರಕಾ ಪೀಠದ ಸ್ವರೂಪಾನಂದ ಸರಸ್ವತಿಗಳ ಕಣ್ಣು ಕೆಂಪಾಗಿಸಿದೆ.ತಮ್ಮ ಸಂಬಂಧದ ಬಗ್ಗೆ ಶ್ರೀಗಳ ಅಸಮಾಧಾನಗೊಂಡಿರುವುದನ್ನ ತಿಳಿದ ದಿಗ್ವಿಯ್ ನನ್ನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿರುವ ಆಶ್ರಮಕ್ಕೆ ಓಡೋಡಿ ಬಂದಿದ್ದಾರೆ. ಶ್ರೀಗಳ ಮುಂದೆ ಮಂಡಿಯೂರಿ ಕುಳಿತ ದಿಗ್ವಿಜಯ್ ಸಿಂಗ್, ಅರ್ಧ ಗಂಟೆ ಕಾಲ ಹಾಗೆಯೇ ಕುಳಿತು ಕೈ ಮುಗಿದು ಶ್ರೀಗಳ ಕ್ಷಮೆ ಯಾಚಿಸಿದ್ದಾರೆ.ಆದರೆ, ಶ್ರೀಗಳು ಮಾತ್ರ ದಿಗ್ವಿಜಯ್ ಅವರ ನಧರ್ಾರವನ್ನ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ದಿಗ್ವಿಜಯ್ ಅವರ ಈ ನಡೆ ಸಮಾಜಕ್ಕೆ ಕೆಟ್ಟ ಸಂದೇಶ ನಡುತ್ತದೆ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ
