ಬಜಪೆ: ಶ್ರೀ ಬ್ರಹ್ಮ ದೇವಸ್ಥಾನ ಸುರಭಿಕಟ್ಟೆ ಕೊಳಂಬೆ ಇಲ್ಲಿನ ಬ್ರಹ್ಮಕಲಶೋತ್ಸವ ಪ್ರಯುಕ್ತ ಪೂರ್ವಭಾವೀ ಸಮಾಲೋಚನಾ ಸಭೆ ಭಾನುವಾರ ಜರಗಿತ್ತು.
ಸ್ಥಳೀಯ ಪ್ರಮುಖರುಗಳಾದ ಶ್ರೀಧರ ಅಳ್ವ, ಮಂಜಯ್ಯ ಶೆಟ್ಟಿ, ಜಿ.ಕೆ ರೈ, ಜಯ ಶೆಟ್ಟಿ, ರಾಜಾರಾಮ ಹೆಗ್ಡೆ, ಗಂಗಾಧರ ಶೆಟ್ಟಿ ಕೌಡೂರು ಮುಂತಾದವರು ಉಪಸ್ಥಿತರಿದ್ದರು.
2016ರ ಫೆ.22ರಿಂದ 25ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರುಗಲಿದೆ ವಸಂತ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ ಸುಖೇಶ್ ಮಾಣಾ ವಂದಿಸಿದರು.
