ಕೈಕಂಬ:ಪೊಂಪೈ ಮಾತೆಯ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಕೊಂಪ್ರಿಚೊ ಆಯ್ತಾರ್ ಪರಮ ಪ್ರಸಾದದ ದಿವ್ಯ ಬಲಿ ಮೆರವಣಿಗೆಯು ನವೆಂಬರ್ 8ರಂದು ನೆರವೇರಿತು. ಪೊಂಪೆ ಮಾತೆ ದೇವಾಲಯದಿಂದ ಕೈಕಂಬ ಜಂಕ್ಷನ್ವರೆಗೆ ಸಾಗಿದ ದಿವ್ಯ ಬಲಿ ಮೆರವಣಿಗೆಯ ನೇತೃತ್ವವನ್ನು ಚಿಕ್ಕಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳಾದ ರೆ.ಪಾ.ರೊನಾಲ್ಡ್ ಕಾರ್ಡೊಜ ವಹಿಸಿದ್ದರು.ನಂತರ ಕೈಕಂಬದಲ್ಲಿ ಹಾಕಿದ ಭವ್ಯ ವೇದಿಕೆಯಲ್ಲಿ ಕನ್ನಡದಲ್ಲಿ ಪ್ರವಚನ ನೀಡಿ ಆರ್ಶಿವಚನ ನೀಡಿದರು.

ಪೊಂಪೈ ಮಾತೆಯ ದೇವಾಲಯದ ಧರ್ಮಗುರುಗಳು ರೆ.ಫಾ.ಪಾವ್ಲ್ ಪಿಂಟೊ ಉಪಸ್ಥಿತತಿದ್ದರು. ಪೊಂಪೆ ಮಾತೆಯ ದೇವಾಲಯದ ವಾರ್ಷಿಕ ಮಹೋತ್ಸವವು ನವೆಂಬರ್ 11 ಬುಧವಾರ ನಡೆಯಲಿದೆ.
















