ಬಂಟ್ವಾಳ ತಾಲ್ಲೂಕಿನ ಕಕ್ಯಪದವು ಶ್ರೀ ಪಂಚದರ್ಗ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಾಮದಪದವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ನೈನಾಡು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡವು 14ಮತ್ತು 17ರ ವಯೋಮಾನ ವಿಭಾಗದಲ್ಲಿ ಮೂವರಿಗೆ ವೈಯಕ್ತಿಕ ಪ್ರಶಸ್ತಿ ಸಹಿತ ‘ಸಮಗ್ರ ಪ್ರಶಸ್ತಿ’ ಗೆದ್ದುಕೊಂಡಿತು. ಮುಖ್ಯಶಿಕ್ಷಕ ಅಶೋಕ್ ಕುಮಾರ್, ದೈಹಿಕ ಶಿಕ್ಷಕ ವಾಸು, ಶಿಕ್ಷಕಿ ರಮಾ ಮೋಹನ್, ವಿದ್ಯಾಶ್ರೀ ಮತ್ತಿತರರು ಇದ್ದಾರೆ.

