ಬಂಟ್ವಾಳ: ತಾಲೂಕಿನ ನಾಗರಿಕ ಹಿತರಕ್ಷಣಾ ಹಾಗೂ ಕಳ್ಳಿಗೆ ಗ್ರಾಮಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಪ್ರತಿಭಟನೆ ನ.2ರಂದು ಪ್ರತಿಭಟನೆ ನಡೆಯಿತು.
ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಸರ್ವೆಸ್ ರಸ್ತೆ ಮತ್ತು ಮೂಲ ಭೂತ ಸೌಕರ್ಯಗಳಿಲ್ಲದೆ ಟೋಲ್ ಗೇಟ್ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನೇತ್ರತ್ವದಲ್ಲಿ ಟೋಲ್ ಗೇಟ್ ಬಳಿ ರಸ್ತೆಯಲ್ಲೆ ಪ್ರತಿಭಟಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಕಾನೂನಿನಂತೆಟೋಲ್ ಗೇಟ್ಅಳವಡಿಸಿದಸ್ಥಳದಲ್ಲಿ ರಸ್ತೆ ವೀಶಾಲವಾಗಿರಬೇಕಾಗಿದ್ದು ಸರ್ವಿಸ್ ರಸ್ತೆ ವಿ.ಐ.ಪಿ ರಸ್ತೆಗಳನ್ನು ಒಳಗೊಂಡಿರಬೇಕುಅಲ್ಲದೇ ಅಂಬುಲೆನ್ಸ್ ಸೌಕರ್ಯ ಯಾಣಿಕರಿಗೆ ವಿಶ್ರಾಂತಿ ಗ್ಋಹ ಶೌಚಾಲಯ ಕೂಡ ಹೊಂದಿರಬೇಕಾಗಿದ್ದರು ಕಾನೂನಿನಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಮಾಡಿರುವುದಿಲ್ಲ ಎಂದು ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಜಿ.ಪಂ ಸದಸ್ಯ ಎಂ ಎಸ್ ಮಹಮ್ಮದ್, ಮಮತಾ ಗಟ್ಟಿ, ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲಿಯಾನ್ ಮಿಥುನ್ ರೈ , ಪ್ರಕಾಶ್ ಶೆಟ್ಟಿ ಮತ್ತಿತರರು ಪ್ರಮುಖರು ಇದ್ದರು.




