ಕೈಕಂಬ: ಮಂಗಳೂರಿನಿಂದ ಎತ್ತಿನಹೊಳೆ ವಿರುದ್ದ ಮಂಗಳೂರಿನಿಂದ ಎತ್ತಿನಹೊಳೆಗೆ ಅ.10ರಿಂದ ಅ.13ರವರೇಗೆ ಕಾಲ್ನಡಿಗೆಯಲ್ಲಿ ಪ್ರತಿಭಟನೆಯ ಅಂಗವಾಗಿ ಎಡಪದವು ಶ್ರೀ ರಾಮಭಜನಾ ಮಂದಿರದಲ್ಲಿ ಪೂರ್ವಬಾವಿ ಸಭೆಯು ಅ.7ರಂದು ಬುಧವಾರ ನಡೆಯಿತು. ಈ ಸಭೆಯಲ್ಲಿ ಮಾಜಿ ಸಚಿವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಕೃಷ್ಣ ಜೆ.ಪಾಲೆಮಾರ್ ಆಗಮಿಸಿ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಿಂದ ಸುಮಾರು 10 ಸಾವಿರ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಎಡಪದವು ಪರಿಸರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಕಾಲ್ಲಡಿಗೆಯನ್ನು ಯಶಸ್ವಿ ಗೊಳಿಸಬೆಕೆಂದರು. ಈ ಸಂದರ್ಭದಲ್ಲಿ ಉಳಿಪಾಡಿಗುತ್ತು ಬಿಜೆಪಿ ಮುಖಂಡ ರಾಜೇಶ್ ನಾಯಕ್,ಶ್ರೀರಮ ಭಜನಾಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ , ವಿನೋದ್ ಮಾಡ ಮತ್ತಿತರರು ಉಪಸ್ಥಿತರಿದ್ದರು.



