ಮುಂಬಯಿ : 11ನೇ ಎಂ. ಆರ್. ಪೈ ಸ್ಮಾರಕ ಪ್ರಶಸ್ತಿಯನ್ನು ಸೆ. 8 ರಂದು ಚರ್ಚ್ಗೇಟ್ ಇಂಡಿಯನ್ ಮರ್ಚೆಂಟ್ಸ್ ಚೇಂಬರಿನ ಸಭಾಗೃಹದಲ್ಲಿ ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಆರ್. ಗಾಂಧಿಯವರು ರಿಸರ್ವ್ ಬ್ಯಾಂಕಿನ ಮಾಜಿ ಡೆಪ್ಯೂಟಿ ಗವರ್ನರ್ ಶ್ರೀಮತಿ ಕಿಶೋರಿ ಉದೇಶಿಯವರಿಗೆ ಪ್ರಧಾನಿಸಿದಾಗ. ಈ ಕಾರ್ಯಕ್ರಮವನ್ನು ಅಖಿಲ ಭಾರತ ಬ್ಯಾಂಕ್ ಹೂಡಿಕೆದಾರರ ಸಂಘ, ಫೋರಂ ಆಪ್ ಫ್ರೀ ಎಂಟರ್ ಪ್ರೈಸಸ್ ಮತ್ತು ಎಂ. ಆರ್. ಪೈ ಪೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದು ಪಂಜಾಬ್ ಮತ್ತು ಮಹಾರಾಷ್ಟ್ರ ಕೋಪರೇಟಿವ್ ಬ್ಯಾಂಕ್ ಈ ಪ್ರಶಸ್ತಿಯನ್ನು ಪ್ರಾಯೋಜಿಸಿದೆ.

ವೇದಿಕೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಎಸ್. ವಾರ್ಯಮ್ ಸಿಂಗ್, ಅಖಿಲ ಭಾರತ ಬ್ಯಾಂಕ್ ಹೂಡಿಕೆದಾರರ ಸಂಘದ ಅಧ್ಯಕ್ಷ ಎಸ್. ಎಸ್. ಭಂಡಾರೆ, ಉಪಾಧ್ಯಕ್ಷ ನಿತಿನ್ ಜಿ. ರಾಹುತ್, ಗೌ. ಕಾರ್ಯದರ್ಶಿ ಆಶೋಕ್ ರಾವತ್, ಶ್ರೀಮತಿ ಗೀತಾ ಆರ್ ಪೈ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕಿಂಗ್ ತಜ್ನೆ ಡಾ. ಅಮಿತಾ ಸೇಗಲ್ ಕಾರ್ಯಾಕ್ರಮವನ್ನು ನಿರೂಪಿಸಿದರು.
ಡಾ. ಅಮಿತಾ ಸೇಗಲ್ ಅವರು ಬ್ಯಾಂಕಿಗ್ ಕ್ಷೇತ್ರದ ಬಗ್ಗೆ ಬರೆದ ಗ್ರಂಥವನ್ನು ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಆರ್. ಗಾಂಧಿಯವರು ಬಿಡುಗಡೆಗೊಳಿಸಿದರು.
ವರದಿ : ಈಶ್ವರ ಎಂ. ಐಲ್




